ಅವರೇ, ಈಗ ಆಡುತ್ತಿರುವ ಮಾತುಗಳು ನಾಲ್ಕು ವರ್ಷಗಳ ಹಿಂದೆ ತಮಗೆ ನೆನಪಿರಲಿಲ್ಲವೇ? ಸಿಎಂ ಕುರ್ಚಿ ಬೇಕಿದ್ದಾಗ ಡಿ ಕೆ ಶಿವಕುಮಾರ್ ಒಳ್ಳೆಯವರು, ಬಿಜೆಪಿ ಜೊತೆ ಸೇರಿದಾಗ ಏಕಾಏಕಿ ಡಿ ಕೆ ಶಿವಕುಮಾರ್ ಕೆಟ್ಟವರಾಗಿಬಿಟ್ಟರೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
,@DKShivakumar ಅವರ ಬಗ್ಗೆ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿರುವ @hd_kumaraswamy ಅವರೇ,
ಈಗ ಆಡುತ್ತಿರುವ ಮಾತುಗಳು ನಾಲ್ಕು ವರ್ಷಗಳ ಹಿಂದೆ ತಮಗೆ ನೆನಪಿರಲಿಲ್ಲವೇ? ಸಿಎಂ ಕುರ್ಚಿ ಬೇಕಿದ್ದಾಗ ಡಿ ಕೆ ಶಿವಕುಮಾರ್ ಒಳ್ಳೆಯವರು, ಬಿಜೆಪಿ ಜೊತೆ ಸೇರಿದಾಗ ಏಕಾಏಕಿ ಡಿ ಕೆ ಶಿವಕುಮಾರ್ ಕೆಟ್ಟವರಾಗಿಬಿಟ್ಟರೇ?
ಅಂದು ಸಿಎಂ ಕುರ್ಚಿಗಾಗಿ ಡಿ…
— Karnataka Congress (@INCKarnataka) October 10, 2023
“>
ಅಂದು ಸಿಎಂ ಕುರ್ಚಿಗಾಗಿ ಡಿ ಕೆ ಶಿವಕುಮಾರ್ ಅವರ ಕೈ ಹಿಡಿದು ಪೋಸ್ ಕೊಟ್ಟಾಗ ತಾವು ಈಗ ಆಡುತ್ತಿರುವ ಮಾತುಗಳು ನೆನಪಿರಲಿಲ್ಲವೇ? ಕುಮಾರಸ್ವಾಮಿಯವರ ಕಣ್ಣುಗಳೇನೋ ಚುನಾವಣೆ ಸಂದರ್ಭದಲ್ಲಿ ನೀರು ಸುರಿಸುತ್ತವೆ ಎಂಬುದು ಜಗತ್ತಿಗೆ ತಿಳಿದ ಸಂಗತಿ ಆದರೆ ಅವರ ನಾಲಿಗೆ ಯಾವ ಯಾವ ಕಾಲದಲ್ಲಿ ಹೇಗೆ ಹೊರಳುತ್ತದೆ ಎಂಬುದು ಪಿ ಹೆಚ್ ಡಿ ಮಾಡಬಹುದಾದ ವಿಷಯವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮೋದಿಯ ಮುಖವನ್ನೇ ನೆಚ್ಚಿಕೊಂಡಿರುವ ಬಿಜೆಪಿಗೆ “ಮೋದಿ ಮುಖ ತೋರಿಸಿದರೆ ಮತ ಬರುವುದಿಲ್ಲ” ಎನ್ನುವ ನಗ್ನ ಸತ್ಯವನ್ನು ಬಿಜೆಪಿ ನಾಯಕ(ರೇಣುಕಾಚಾರ್ಯ) ರೇ ಹೇಳಿದ್ದಾರೆ. ಡಿಯರ್ ಬಿಜೆಪಿ ಇದು ನಿಮಗೆ ಆಘಾತ, ಆತಂಕ ತರುವಂತಹ ಸತ್ಯವಲ್ಲವೇ? ದೇಶದ, ರಾಜ್ಯದ ಜನತೆ ಮೋದಿಯ ದುರಾಡಳಿತದಿಂದ, ಬೂಟಾಟಿಕೆಯಿಂದ, ಸುಳ್ಳುಗಳಿಂದ, ಕರ್ನಾಟಕಕ್ಕೆ ಎಸಗಿದ ದ್ರೋಹದಿಂದ ರಾಜ್ಯದ ಜನತೆ ರೋಸಿ ಹೋಗಿದ್ದಾರೆ ಎಂಬ ಸತ್ಯದ ಅರಿವಾಗಿದೆಯೇ? ಎಂದು ಕಾಂಗ್ರೆಸ ಪ್ರಶ್ನಿಸಿದೆ.