”ಅಜ್ಜ ಮೊಮ್ಮಗನಿಗೆ ಬಿಟ್ಟು ಕೊಟ್ಟರೆ ತ್ಯಾಗ…ಅವ್ವ ಮಗನಿಗೆ ಬಿಟ್ಟು ಕೊಟ್ಟರೇ ಇದನ್ನ ತ್ಯಾಗ ಅಂತರಾ ?” ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಅವರು ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.
ಮಂಡ್ಯದಲ್ಲಿ ನಡೆದ ಬಿಜೆಪಿ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಾಯಕರು ಕುಟುಂಬ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಅವ್ವ ಮಗನಿಗೆ ಸೀಟು ಬಿಟ್ಟು ಕೊಡುವದನ್ನು ತ್ಯಾಗ ಅಂತರಾ ? ಎಂದು ಪರೋಕ್ಷವಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಟೀಕಿಸಿದರು.
ಮಂಡ್ಯದಲ್ಲಿ ಪರಿವರ್ತನೆ ಅಲೆ ಬೀಸುತ್ತಿದೆ. ಅಲೆಯಲ್ಲಿ ಬಿಜೆಪಿ 7 ಸ್ಥಾನಗಳನ್ನ ಗೆಲ್ಲುತ್ತೆ. ಇಂಡಿಯಾದ ಜೊತೆ ಮಂಡ್ಯ ಇದೇ ಅನ್ನೋದನ್ನ ಇದು ತೋರಿಸುತ್ತೆ ಎಂದು ಹೇಳಿದರು.