Thursday, September 19, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಯಾತ್ರೆಗೆ ಶುಭ ಕೋರಿ ಬೀಳ್ಕೊಟ್ಟ ಗಣಿಗ ರವಿಕುಮಾರ್

ಧರ್ಮಸ್ಥಳ ಪ್ರವಾಸಕ್ಕೆ ತೆರಳಿದ ನೂರಾರು ಯಾತ್ರಾರ್ಥಿಗಳಿಗೆ ಇಂದು ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಶುಭ ಕೋರಿ ಬೀಳ್ಕೊಟ್ಟರು.

ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಗ್ರಾಮದ ದಂಡಿನಮ್ಮ ದೇವಸ್ಥಾನದ ಆವರಣದಲ್ಲಿ ನೂರಾರು ಯಾತ್ರಾರ್ಥಿಗಳಿಗೆ ಗಣಿಗ ರವಿಕುಮಾರ್ ಸೇವಾ ಟ್ರಸ್ಟ್ ವತಿಯಿಂದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ಯಾತ್ರೆಗೆ ಶುಭ ಹಾರೈಸಿ ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣಿಗ ರವಿಕುಮಾರ್,ಈಗಾಗಲೇ ಸಾವಿರಾರು ಮಂದಿ ಧರ್ಮಸ್ಥಳ ಯಾತ್ರೆಗೆ ಹೋಗಿ ಬಂದಿದ್ದಾರೆ. ಇಂದು ಕೂಡ ಹಲವು ಬಸ್ ಗಳಲ್ಲಿ ಜನರು ಧರ್ಮಸ್ಥಳ ಯಾತ್ರೆಗೆ ತೆರಳುತ್ತಿರುವುದು ಸಂತಸ ತಂದಿದೆ. ಶ್ರೀ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ಪಾಜಿಗೌಡ, ಚಿಕ್ಕಬಳ್ಳಿ ಕೃಷ್ಣಪ್ಪ, ಸಿದ್ದೇಗೌಡ.ಪುಟ್ಟಪ್ಪ, ಸಿದ್ದಪ್ಪ, ಡ್ಯಾಪಸಂದ್ರದ ಉಮೇಶ್,ಮಣಿ, ವಿನಯ್, ಪ್ರಶಾಂತ್, ರವೀಂದ್ರ, ಜಯರಾಮಣ್ಣ, ಚೇತನ್, ಓದ್ಲಿಂಗೇಗೌಡ,ಶ್ರೀನಿವಾಸ್, ಪುಟ್ಟಪ್ಪ,ವೆಂಕಟೇಶ್ ಹಾಗೂ ಮತ್ತಿತರ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!