Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮೃತ ಪ್ರಯಾಣಿಕನ ಕುಟುಂಬಕ್ಕೆ ಪರಿಹಾರ ವಿತರಣೆ

ಮಂಡ್ಯ ವಿಭಾಗದ ಕೆ.ಆರ್ ಪೇಟೆ ಘಟಕಕ್ಕೆ ಸೇರಿದ ವಾಹನ ಕೆಎಸ್ಆರ್’ಟಿಸಿ ಬಸ್ಸು ಡಿಂಕ – ಬನ್ನಂಗಾಡಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಬಸ್ಸಿನಿಂದ ಬಿದ್ದು ಸಾವಿಗೀಡಾದ ಬನ್ನಂಗಾಡಿ ಜವರೇಗೌಡ ಬಿನ್ ಕರೀಗೌಡ(80) ಅವರ ಕುಟುಂಬಕ್ಕೆ ಕೆಎಸ್ಆರ್’ಟಿಸಿ ಅಧಿಕಾರಿಗಳು ₹ 3 ಲಕ್ಷ ಪರಿಹಾರ ವಿತರಿಸಿದರು.

ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು ಅವರು ಜವರೇಗೌಡರ ವಾರಸುದಾರರಾದ ನೀಲಮ್ಮ ಅವರಿಗೆ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮುಖಂಡ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!