ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಮಂಡ್ಯ ಜಿಲ್ಲಾ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್ ಘಟಕಗಳು ಹಾಗೂ ಯುವ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಯುವ ಉತ್ಸವ ಹಮ್ಮಿಕೊಳ್ಳಲಾಗಿದೆ.
ಜನರಲ್ಲಿ ಯುವ ಪ್ರತಿಭೆ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವ ಜೊತೆಗೆ ರಾಷ್ಟ್ರದ ಕಡೆಗೆ ಯುವಕರ ಆಲೋಚನೆಗಳಿಗೆ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟದವರೆಗೆ ಸ್ಪರ್ಧೆಗಳನ್ನು ಸಂಘಟಿಸಲಾಗಿದೆ.
ಯುವ ಬರಹಗಾರರ ಕವನ ಸ್ಪರ್ಧೆ (ಪೊಯೆಟ್ರಿ), ಯುವ ಕಲಾವಿದರ ಚಿತ್ರಕಲೆ ಸ್ಪರ್ಧೆ (ಪೇಟಿಂಗ್), ಛಾಯಾಗ್ರಹಣ ಮತ್ತು ಕಾರ್ಯಗಾರ ಸ್ಪರ್ಧೆ (ಮೊಬೈಲ್ ಫೊಟೋಗ್ರಾಫಿ), ಭಾಷಣ ಸ್ಪರ್ಧೆ (ಡಿಕ್ಲಮೆಷನ್ ಕಂಟೆಸ್ಟ್), ಜಿಲ್ಲಾ ಸಾಂಸ್ಕಂತಿಕ ಉತ್ಸವ (ಗುಂಪು ಕಾರ್ಯಕ್ರಮ), ಜಿಲ್ಲಾ ಯುವ ಸಮಾವೇಶ (ಡಿಸ್ಟ್ರೀಕ್ ಯುತ್ ಕನ್ವೆಂಷನ್) ವಿವಿಧ ರೀತಿಯ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸ್ಪರ್ಧಾರ್ಥಿಗಳ ವಯಸ್ಸು ಏ.1,2022 ಕ್ಕೆ 15 ರಿಂದ 29ರ ವರ್ಷದೊಳಗಿರಬೇಕು, ಸ್ಪರ್ಧೆಗಳು ಅಕ್ಟೋಬರ್ 28 ರಂದು ಮಂಡ್ಯದ ಕರ್ನಾಟಕ ಸಂಘ (ಸ್ಟೇಡಿಯಂ ಹತ್ತಿರ) ನಡೆಯಲಿದ್ದು. ಅಕ್ಟೋಬರ್ 21 ರೊಳಗಾಗಿ ನೆಹರು ಯುವ ಕೇಂದ್ರದ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ನೆಹರು ಯುವ ಕೇಂದ್ರ ಕಛೇರಿಯ ವೆಬ್ಸೈಟ್ ಗೂಗಲ್ ಲಿಂಕ್https://docs.google.com/