Thursday, September 19, 2024

ಪ್ರಾಯೋಗಿಕ ಆವೃತ್ತಿ

ವರದಕ್ಷಿಣೆಗೆ ಬಲಿಯಾದ ಮಂಡ್ಯದ ಮಹಿಳೆ

ಗಂಡ ಮತ್ತವನ ಮನೆಯವರ ಮಿತಿಮೀರಿದ ವರದಕ್ಷಿಣೆ ದಾಹಕ್ಕೆ ಮಂಡ್ಯ ನಗರದ ಹೆಣ್ಣು ಮಗಳೊಬ್ಬಳು ಮೈಸೂರಿನಲ್ಲಿ ಬಲಿಯಾಗಿದ್ದಾಳೆ.

21 ವರ್ಷದ ತರನ್ನುಮ್ ಬಾನು ಸಾವಿಗೀಡಾದ ಮಂಡ್ಯದ ಮುಸ್ಲಿಂ ಬ್ಲಾಕ್ ಮಹಿಳೆ.ವಿವಾಹಿತೆಯಾದ ನನ್ನ ಮಗಳು ತರನ್ನಮ್ ಬಾನು ಅವರನ್ನು ವರದಕ್ಷಿಣೆ ತರುವಂತೆ ಪೀಡಿಸಿ ಆಕೆಯ ಗಂಡ ಮತ್ತವನ ಮನೆಯವರು ಕೊಲೆ ಮಾಡಿದ್ದಾರೆಂದು ತರನ್ನಮ್ ಬಾನು ಪೋಷಕರು ಮೈಸೂರು ಉದಯಗಿರಿ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.

ತರನ್ನಮ್ ಬಾನು ಮೂಲತಃ ಮಂಡ್ಯ ನಗರದ ಡ್ರೈವರ್ ಬಷೀರ್ ಖಾನ್ ಎಂಬವರು ಮಗಳು. 3 ವರ್ಷದ ಹಿಂದೆ ಮೈಸೂರಿನ ರಾಜೀವ್ ನಗರದ ನಿವಾಸಿ ಶಬ್ನಂ ಕಲ್ಯಾಣ ಮಂದಿರದ ಸಮೀಪ ವಾಸವಾಗಿರುವ ಜಿಮ್ ಟ್ರೈನರ್ ಸೈಯದ್ ಉಮರ್ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ಒಂದು ವರ್ಷದ ಮಗುವಿದೆ.

ಮದುವೆಯಾದಾಗಿನಿಂದಲೂ ಸೈಯದ್ ಉಮರ್ ನಮ್ಮ ಸಹೋದರಿ ತರನ್ನಮ್ ಬಾನುಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಗಂಡ,ಅವನ ತಂದೆ ಪದೇ ಪದೇ ಹೊಡೆದು ತವರು ಮನೆಗೆ ಕಳಿಸುತ್ತಿದ್ದರು.

ಮದುವೆ ಸಂದರ್ಭದಲ್ಲಿ 7 ಲಕ್ಷ ಮೌಲ್ಯದ ಚಿನ್ನಾಭರಣ ನೀಡಲಾಗಿದ್ದರೂ,ಪದೇ ಪದೇ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ನ್ಯಾಯ ಪಂಚಾಯ್ತಿಗಳೂ ನಡೆದಿದ್ದವು. ಇತ್ತೀಚೆಗೆ ಮೂರು ತಿಂಗಳು ನಮ್ಮ ಸಹೋದರಿ ಮಂಡ್ಯದಲ್ಲೇ ಇದ್ದು, ಕಳೆದ 3 ತಿಂಗಳ ಹಿಂದೆ ಒಂದಷ್ಟು ಹಣ ನೀಡಿ ಗಂಡನ ಮನೆಗೆ ಕಳಿಸಲಾಗಿತ್ತು ಎಂದು ಮೃತ ತರನ್ನುಮ್ ಬಾನು ಸಹೋದರ ಇರ್ಫಾನ್ ತಿಳಿಸಿದರು.

ನಮ್ಮ ಮಗಳನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಉದಯಗಿರಿ ಠಾಣೆಯ ಪೊಲೀಸರು ಆರೋಪಿ ಸೈಯದ್ ಉಮರ್ ಮತ್ತು ಅವರ ತಂದೆ ಲಿಯಾಖತ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳದಲ್ಲಿ ತರನ್ನಮ್ ಬಾನು ಕಡೆಯವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು, ಈ ಹಿನ್ನಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!