ಮಳವಳ್ಳಿ ತಾಲ್ಲೂಕಿನ ಬಸವನ ಬೆಟ್ಟದ ಗ್ರಾಮಸ್ಥರು ಬರಗಾಲದ ಪರಿಣಾಮದಿಂದ ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದರು. ಈ ವಿಚಾರ ತಿಳಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಬಸವನ ಬೆಟ್ಟ ಗ್ರಾಮದಲ್ಲಿ ಬೋರ್ವೆಲ್ ಕೊರೆಸಿ, ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಗ್ರಾಮಕ್ಕೆ ಕುಡಿಯುವ ನೀರು ಬಂದಿದ್ದರಿಂದ ಕುಡಿಯುವ ನೀರಿನ ಬವಣೆಗೆ ನೀಗಿದ್ದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇತ್ತು. ಆದರೆ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಶಾಸಕ ನರೇಂದ್ರಸ್ವಾಮಿ ಅವರು ಸ್ಪಂದಿಸಿರುವುದು ಹರ್ಷ ತಂದಿದೆ, ಇದಕ್ಕಾಗಿ ಶಾಸಕರಿಗೆ ಅಭಾರಿಯಾಗಿರುತ್ತೇವೆಂದು ಗ್ರಾಮಸ್ಥರು ತಿಳಿಸಿದ್ದಾರೆ.