Thursday, September 19, 2024

ಪ್ರಾಯೋಗಿಕ ಆವೃತ್ತಿ

ದುಬೈ ನಿಂಗಣ್ಣನ ಟೀ ಗೆ ಮಾರುಹೋದ ಸಂಸದೆ ಸುಮಲತಾ

ಪಾಂಡವಪುರ ಪಟ್ಟಣದ ದುಬೈ ನಿಂಗಣ್ಣನ ಟೀ ಅಂಗಡಿಗೆ ತೆರಳಿ ಸಂಸದೆ ಸುಮಲತಾ ಅಂಬರೀಶ್ ಟೀ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಂಡವಪುರ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂಸದೆ ಸುಮಲತಾ, ಕೃಷ್ಣನಗರದ ದುಬೈ ನಿಂಗಪ್ಪನ ಟೀ ಅಂಗಡಿ ಬಳಿ ಟೀ ಕುಡಿದು ಸರಳತೆ ಮೆರೆದರು.

ಮಳೆ ಹಾನಿ ಪ್ರದೇಶಗಳಾದ ಅರಳಕುಪ್ಪೆ, ಹಿರೋಡೆಕೆರೆ, ಬೇವಿನಕುಪ್ಪೆ, ಲಕ್ಷ್ಮಿಸಾಗರ ಹಾಗೂ
ಕೆರೆತೊಣ್ಣೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ದುಬೈ ನಿಂಗಪ್ಪಣ್ಣನ ಟೀ ಅಂಗಡಿ ಬಳಿ ಕಾರು ನಿಲ್ಲಿಸಿ ಟೀ ಕುಡಿದು ಅದರ ಸ್ವಾದವನ್ನು ಅನುಭವಿಸಿದರು. ಸಾಮಾನ್ಯ ಜನರಂತೆ ಟೀ ಕುಡಿಯುವ ಮೂಲಕ ಸರಳತೆ ಮೆರೆದರು. ಈ ಸಂದರ್ಭದಲ್ಲಿ ಟೀ ಅಂಗಡಿ ಬಳಿ ಇದ್ದ ಸಾರ್ವಜನಿಕರತ್ತ ಕೈ ಬೀಸಿ ಮೈಸೂರು ಕಡೆಗೆ ಸುಮಲತಾ ತೆರಳಿದರು.

ಈ ವೇಳೆ ರೈತಸಂಘದ ವರಿಷ್ಠ ನಾಯಕಿ ಸುನೀತಾ ಪುಟ್ಟಣ್ಣಯ್ಯ ಅವರು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಸಾಥ್ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!