ಮದ್ದೂರು ತಾಲ್ಲೂಕಿನ ಸಿ.ಎ.ಕೆರೆ ಹೋಬಳಿಯ ಮೆಣಸಗೆರೆ ಗ್ರಾಮದ ಎನ್.ನಾಗರಾಜು ಎಂಬುವವರು ಜಮೀನು ವಿವಾದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವುವಾಗಲೇ, ಜಮೀನಿನ ನಕಲಿ ಸ್ಕೆಚ್ ತಯಾರಿಸಿ ತಮ್ಮ ಜಮೀನನ್ನು ಕಬಳಿಸಲು ಯತ್ನಿಸಿದ್ದಾರೆಂದು ಜಯರಾಮ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಣಸಗೆರೆ ಗ್ರಾಮದ ಸರ್ವೇಂ ನಂ.106/3C ಜಮೀನಿಗೆ ಸಂಬಂಧಿಸಿದಂತೆ ವಿವಾದವು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ಹೀಗಿರುವಾಗ ತನ್ನ ಎದುರುದಾರ ಎನ್.ನಾಗರಾಜು ನಕಲಿ ಸ್ಕೆಚ್ ತಯಾರಿಸಿ, ತಹಶೀಲ್ದಾರ್ ಅವರಿಗೆ ತಪ್ಪು ಮಾಹಿತಿ ನೀಡಿದ್ದು, ಅದರಂತೆ ತಹಶೀಲ್ದಾರ್ ಅವರು ಮುಂಬರುವ ನ.14ರಂದು ಜಮೀನು ವಶಕ್ಕೆ ಪಡೆಯಲು ಅಂತಿಮ ಗಡುವು ನೀಡಿದ್ದಾರೆ ಎಂದು ಆರೋಪಿದರು.
ನನ್ನ ಎದುರುದಾರ ತಪ್ಪು ಮಾಹಿತಿ ನೀಡಿ ಸರ್ಕಾರಿ ಅಧಿಕಾರಿಗಳನ್ನು ವಂಚಿಸುತ್ತಿದ್ದು, ತಹಶೀಲ್ದಾರ್ ಅವರು ವಿವೇಚನೆಯಿಂದ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.