ಮಂಡ್ಯ ನಗರದ ಗುತ್ತಲು ರಸ್ತೆಯಲ್ಲಿನ ಜಯಲಕ್ಷ್ಮಿ ಸಾಮಿಲ್ ಒಳಗಡೆ ಅಕಸ್ಮಿಕ ಬೆಂಕಿಗೆ ಅವಘಡ ಸಂಭವಿಸಿದೆ.
ಬುಧವಾರ ಸಂಜೆ ಸಾಮಿಲ್ ಒಳಗಿನ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.
ಅಕ್ಕಪಕ್ಕ ಇದ್ದ ಮರ ಮುಟ್ಟುಗಳಿಗೆ ಬೆಂಕಿ ವ್ಯಾಪಿಸಲು ಅರಂಭವಾದಾಗ ಎಚ್ಚತ್ತ ಕೆಲಸಗಾರರು ಅಗತ್ಯ ಸುರಕ್ಷತಾ ಕ್ರಮ ಕೈಗೊಂಡರಲ್ಲದೆ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ ಹಿನ್ನಲೆಯಲ್ಲಿ ಅಗ್ನಿಶಾಮಕ ಅಧಿಕಾರಿ ವೆಂಕಟೇಶ್ ನೇತೃತ್ವದ ತಂಡ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನೆಯಿಂದ 30 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.