ಮದ್ದೂರು ಮಳವಳ್ಳಿ ರಸ್ತೆಯ ಪ್ರೊ ಎಮ್ ಡಿ ನಂಜುಂಡಸ್ವಾಮಿ ರೈತಚೈತನ್ಯ ಕೇಂದ್ರದ ಬಳಿ ಕರ್ನಾಟಕ ರಾಜ್ಯ ರೈತಸಂಘದ ಮುಖಂಡರು ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ತೋರಿಸಿ ಕಬ್ಬಿನ ಬೆಲೆ ನಿಗಧಿ ಮಾಡದ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು.
ಮದ್ದೂರಿನ ರೈತ ಸಂಘಟನೆಯು ಮುಖ್ಯಮಂತ್ರಿಯ ಜನಸಂಕಲ್ಪ ಯಾತ್ರೆಯ ವೇಳೆ ಘೋಷಣೆಯನ್ನು ಕೂಗುತ್ತಾ, ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶಿಸಿದರು. ಬೆಳಗಾವಿಯ ಅಧಿವೇಶನದಲ್ಲಿ ಸರ್ಕಾರವು ರೈತರಿಗೆ ಕಬ್ಬಿನ ನಿಗಧಿಗೊಳಿಸುವ ಬಗ್ಗೆ ಚರ್ಚಿಸಬೇಕೆಂದು ಒತ್ತಾಯಿಸಿದರು. ರೈತ ಮುಖಂಡರಿಗೆ ಬೆಳಿಗ್ಗೆಯಿಂದಲು ಪೊಲೀಸರು ಪ್ರೊ ಎಮ್ ಡಿ ನಂಜುಂಡಸ್ವಾಮಿ ರೈತ ಚೈತನ್ಯ ಕೇಂದ್ರ ಬಳಿ ಸರ್ಪಗಾವಲು ಹಾಕಿದ್ದರು.
ರೈತ ಮುಖಂಡರಾದ ಲಿಂಗಪ್ಪಾಜಿ ,ಜಿ ಎ ಶಂಕರ್, ಶೆಟ್ಟಹಳ್ಳಿ ರವಿ ,ವಿನೋದ್ ಬಾಬು ಸೇರಿದಂತೆ ಹಲವರು ಹಾಜರಿದ್ದರು