Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಶಂಕರಪುರದಲ್ಲಿ ರೈತ ದಿನಾಚರಣೆ

ಮದ್ದೂರು ತಾಲ್ಲೂಕಿನ ಶಂಕರಪುರ ಗ್ರಾಮದ ಜೈ ಜವಾನ್ ಜೈ ಕಿಸಾನ್ ಆತ್ಮ ಕೃಷಿ ಸಂಘವು ಗ್ರಾಮಸ್ಥರ ಸಹಯೋಗದಲ್ಲಿ ರೈತದಿನಾಚರಣೆ ಹಮ್ಮಿಕೊಂಡಿದೆ.

ಇದೇ ಡಿ 23ರ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತದಿನಾಚರಣೆ ದಿನವಾಗಿ ದೇಶಾದ್ಯಾಂತ ಆಚರಿಸಲಾಗುತ್ತಿದ್ದು, ಶಂಕರಪುರದಲ್ಲಿ ರೈತದಿನ ಹಾಗೂ ರೈತನಾಯಕ ಕೆ ಎಸ್ ಪುಟ್ಟಣ್ಣಯ್ಯ ರವರ ಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದು ಸಂಘದ ಮುಖ್ಯಸ್ಥ ಅವಿನಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಇದೆ ಸಂದರ್ಭದಲ್ಲಿ ಮಾದರಿ ರೈತರಿಗೆ ಸನ್ಮಾನ ಕಾರ್ಯಕ್ರಮ ಕೂಡ ಏರ್ಪಡಿಸಿದ್ದು, ರೈತರಲ್ಲಿ ಆತ್ಮಸ್ಥೈರ್ಯ ತುಂಬಿ, ಯುವ ರೈತರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಕೃಷಿ ಪರ ಒಲವು ಮೂಡಿಸಲು ಶ್ರಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!