ಅನ್ನದಾತರಾದ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕಾದದ್ದು ಸರ್ಕಾರಗಳ ಕರ್ತವ್ಯ.
ಆದರೆ ಸರ್ಕಾರಗಳು ತಮ್ಮ ಕರ್ತವ್ಯ ಮರೆತು ರೈತರು ಬೀದಿಗಿಳಿದು ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ ಮಾಡುತ್ತಿರುವ ಕ್ರಮ ಖಂಡನೀಯ ಎಂದು ಕದಲೂರು ಉದಯ್ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಮತ್ತು ಭತ್ತಕ್ಕೆ ವೈಜ್ಞಾನಿಕ ಬೆಲೆ ನಿಗಧಿಗೊಳಿಸಲು, ಹಾಲಿನ ದರ ಹೆಚ್ವಳ ಮಾಡುವಂತೆ, ಭತ್ತ ಹಾಗೂ ರಾಗಿ ಖರೀದಿ ಕೇಂದ್ರ ಖಾಯಂ ಆಗಿ ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವ ದಲ್ಲಿ ನಡೆಯುತ್ತಿರುವ ಆಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಗಳು ಈ ಕೂಡಲೆ ರೈತರ ಬೇಡಿಕೆಗೆ ಸ್ಪಂದಿಸಿ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗಧಿಗೊಳಿಸಬೇಕು ಹೀಗೆ ಬೆಲೆ ನಿಗಧಿ ಮಾಡುವ ವೇಳೆ ಸಕ್ಕರೆ ಇಳವರಿ 10% ಇರಬೇಕೆಂಬುದನ್ನ ಕೈ ಬಿಟ್ಟು 8.5 ರ ಇಳುವರಿ ಪರಿಗಣಿಸಬೇಕೆಂಬ ಆಗ್ರಹ ಪರಿಗಣಿಸಬೇಕೆಂದು ರೈತರ ಪರವಾಗಿ ಆಗ್ರಹಿಸುತ್ತೇನೆ ಎಂದರು