Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಮನೆ ಹಾನಿಗೊಳಗಾಗಿದ್ದ ಕುಟುಂಬಕ್ಕೆ ಧನ ಸಹಾಯ

ಮಳೆಯಿಂದ ಮನೆಯ ಮೇಲ್ಚಾವಣಿ ಕುಸಿತಕ್ಕೆ ಒಳಗಾಗಿದ್ದ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿನಾಯಕನಕೊಪ್ಪಲು ಗ್ರಾಮದ ಲಕ್ಷ್ಮಮ್ಮ ಕೋ ಲೇಟ್ ದಾಳಿ ಚೆಲುವಯ್ಯ ಎಂಬುವರ ಕುಟುಂಬಕ್ಕೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಆರ್ಥಿಕ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಸೋಮಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಹಾಯ ಮಾಡುವ ಮನೋಭಾವನೆ ಉಳ್ಳವರ ಸಂಖ್ಯೆ ಕಡಿಮೆಯಾಗಿದೆ. ಇಂತಹ ಸ್ಥಿತಿಯಲ್ಲಿ ಸಹಾಯ ಮಾಡಬೇಕು ಎಂದು ಕೇಳಿಕೊಂಡಾಗ ಸಂತೋಷದಿಂದ ಬಡ ಕುಟುಂಬಸ್ಥರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದರು.
ಎಸ್.ಎಲ್.ಕುಮಾರ್, ಪಾಣಿ ಜಗದೀಶ್, ಫಾರಂ ಕುಮಾರಣ್ಣ, ಪಾಪುಳ್ಳಿ ಮಂಜಣ್ಣ, ದೊಡ್ಡಪ್ಪನ ಪಾಪಣ್ಣ, ದೀಪು, ಮನು, ಚಿಕ್ಕೇಗೌಡ ಮಂಜುನಾಥ್, ಇಲಾಖೆ ರಾಮೇಗೌಡರು, ಬೇಕರಿ ಅಶೋಕ್, ದ್ಯಾವನ ಮನೆ ಮಂಜಣ್ಣ, ಸುಬ್ಬಣ್ಣ ನಾಗರಾಜ, ಬೊಮ್ಮರಾಯಣ್ಣನ ಪುಟ್ಟಪ್ಪ, ಕುಮಾರಣ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!