ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಂತೆ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಸಜ್ಜಾಗಿರೋದು ಸಂತಸದ ವಿಷಯ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ಮತ್ತು ಪ್ರಯೋಗಾಲಯ ನೂತನ ಕೊಠಡಿಯ ಉದ್ಘಾಟನೆ ಮಾಡಿ ಮಾತನಾಡಿದ ಅವರು ಸರೋಜಿನಿಕರು ರಕ್ತ ಪರೀಕ್ಷೆಗಳಿಗೆ ಖಾಸಗಿ ಲ್ಯಾಬ್ ಗ ಳಿಗೆ ಹೋಗಿ ಹೆಚ್ಚು ಹಣ ನೀಡಬೇಕಾಗಿತ್ತು ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದೊಂದಿಗೆ ಆಧುನಿಕ ಶಸ್ತ್ರ ಚಿಕಿತ್ಸೆ ಕೊಠಡಿ ಮತ್ತು ರಕ್ತ ಪರೀಕ್ಷೆ ಪ್ರಯೋಗಗಳನ್ನು ಉದ್ಘಾಟಿಸಲಾಗಿದ್ದು ಸಾರ್ವಜನಿಕರು ಸದುಪಯೋಗ ಪಡಿಸುವುದಕ್ಕೆ ಎಂದು ತಿಳಿಸಿದರು.
2017ರಲ್ಲಿ ಆರಂಭಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ವಲ್ಪ ತಡವಾಗಿ ಸಾರ್ವಜನಿಕ ಸೇವೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರುವುದು ಸಂತೋಷದ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಡಳಿತ ಅಧಿಕಾರಿ ಡಾ. ಸಂಜಯ್. ಡಾ. ವೀರಭದ್ರಪ್ಪ. ಡಾ.ರೇಣುಕಾದೇವಿ, ಡಾ. ಶಿವಸ್ವಾಮಿ ಡಾ. ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು. ಮುಖಂಡರಾದ ವಿಶ್ವಾಸ್. ರಾಜು. ದೊಡ್ಡಯ್ಯ. ಶಿವ ಸ್ವಾಮಿ ರಾಜಶೇಖರ್ ಸೇರಿದಂತೆ ಇತರರಿದ್ದರು.