Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಚ್.ಟಿ. ಮಂಜು ಮತ್ತು ಸಾರಂಗಿ ಮಂಜು ನಡುವೆ ಬೈಗುಳದ ಫೈಟ್

ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಚುನಾವಣೆಗೆ ಆರೇಳು ತಿಂಗಳು ಇರುವಾಗಲೇ ಕೆಟ್ಟ ಮಾತಿನ ಫೈಟ್ ಶುರುವಾಗಿದೆ.

ಜಿ.ಪಂ. ಮಾಜಿ ಸದಸ್ಯ, ಮನ್ಮುಲ್ ನಿರ್ದೇಶಕ ಎಚ್. ಟಿ. ಮಂಜು ಹಾಗೂ ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡರ ಮೊಮ್ಮಗ ಸಾರಂಗಿ ಮಂಜು, ನಡುವೆ ಕೆಟ್ಟ ಕೊಳಕಾದ ಭಾಷೆಯಲ್ಲಿ ನಡೆದ ಬೈಗುಳದ ಫೈಟ್ ಈಗ ಎಲ್ಲೆಡೆ ಸುದ್ದಿಯಾಗಿದೆ.

ಎಚ್.ಟಿ.ಮಂಜು ಮತ್ತು ಸಾರಂಗಿ ಮಂಜು ಇಬ್ಬರ ನಡುವೆ ನಡೆದಿರುವ ಮಾತಿನ ಫೈಟ್ ಕೆ.ಆರ್ ಪೇಟೆ ಕ್ಷೇತ್ರ ರಣರಂಗವಾಗುವ ಎಲ್ಲಾ ಮುನ್ಸೂಚನೆ ನೀಡುತ್ತಿದೆ.

ಕುಂಭಮೇಳ ನಡೆಸಲು ಸಚಿವ ನಾರಾಯಣಗೌಡ ಸಾಕಷ್ಟು ಕಲೆಕ್ಷನ್ ಮಾಡಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಎಂಬ ವಿಷಯದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮಾತಿನ ಫೈಟ್ ನಡೆದಿದೆ.

ಸಾರಂಗಿ ಮಂಜು ಎಚ್.ಟಿ ಮಂಜುಗೆ ಕುಂಭಮೇಳದ ವಿಚಾರವಾಗಿ ಏನು ನಾರಾಯಣ ಗೌಡ್ರು ಬಗ್ಗೆ ಲೂಟಿ ಅಂತೆಲ್ಲಾ ಮಾತಾಡ್ತೀಯ,ನೀನು ಕಾರ್ಯಕ್ರಮ ಮಾಡು ಬೇಡ ಅಂದೋರು ಯಾರು? ಲೇ ಅಂತ ಯಾರಿಗೆ ಅಂತಿಯಾ, ನಾರಾಯಣಗೌಡ್ರು ಏನ್ ಲೂಟಿ ಮಾಡಿದ್ದಾರೆ.ನಮ್ಮ ಕುಟುಂಬದವರ ಬಗ್ಗೆ ನೀನೇನೋ ಮಾತಾಡೋದು.ನನ್ನ ಲೇ ಅಂತೀಯಾ,ನಿನ್ನನ್ನು ಲೋ ಅಂತೀನಿ, ಗೌಡ್ರು ಬಗ್ಗೆ ಮಾತಾಡೋಕೆ ನೀವ್ಯಾರ್ರೋ ಬೋಳಿಮಕ್ಳಾ…ಅಂತೆಲ್ಲಾ ಮಾತಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಎಚ್.ಟಿ.ಮಂಜು ಮತ್ತು ಬೆಂಬಲಿಗರು ಸಾರಂಗಿ ಮಂಜನಿಗೆ ಬೋಸುಡಿಕೆ ಅಂತೆಲ್ಲ ಕೆಟ್ಟದಾಗಿ ಮಾತನಾಡಿದ್ದಾರೆ. ಎಚ್.ಟಿ.ಮಂಜು ಕೂಡಾ ನಾನು ನಿನ್ನತ್ರ ಹೇಳಿಸ್ಕೊಂಡು ಕಾರ್ಯಕ್ರಮ ಮಾಡಬೇಕಾ,ನನಗೆ ನನ್ನ ದುಡ್ಡಲ್ಲಿ ಕಾರ್ಯಕ್ರಮ ಮಾಡೋ ಶಕ್ತಿ ಇದೆ. ನಾರಾಯಣ ಗೌಡರನ್ನು ಮಿನಿಸ್ಟರ್,ಎಂಎಲ್ಎ ಮಾಡೋಕೆ ನೂರಕ್ಕೆ ಸಾವಿರ ಭಾಗ ನಾನು ನನ್ನ ಪ್ರಾಣ ಒತ್ತೆ ಇಟ್ಟು ಮಾಡಿದ್ದೇನೆ.

ಇದಕ್ಕೆ ಸಾರಂಗಿ ಮಂಜು ನೀನೇನು ಆರು ಹೋಬಳಿಯಲ್ಲಿ ಮತ ಹಾಕ್ಸಿದ್ದೀಯ.ನೀನ್ಯಾಕೆ ಟಿಕೆಟ್ ಪಡೆಯಲು ಒದ್ದಾಡ್ತಿದಿಯಾ,ಎಂದಾಗ ನೀನು ಸರಿಯಾಗಿ ಮಾತನಾಡು ಮಗಾ ಎಂದಿದ್ದಕ್ಕೆ ಸಿಟ್ಟಾದ ಸಾರಂಗಿ ಮಂಜು ನಾನ್ ಯಾಕೆ ನಿನ್ನ ಮಗ ಆಗಲಿ ಎನ್ನುತ್ತಾರೆ. ಲೋ ನಾನು ನಿನ್ನನ್ನು ನನ್ನ ಮಗ ಅಂತ ಹೇಳಿಲ್ಲ. ಸರಿಯಾಗಿ ತಿಳಿದುಕೊಂಡು ಮಾತಾಡು ಮಗಾ ಅಂದಿದ್ದೇನೆ ಎಂದು ಹೇಳುತ್ತಾರೆ.

ರಾಜಾಹುಲಿ ದಿನೇಶ್ ನಿಮ್ ಮಾವನಿಗೆ ಹೊಡೆಯಲು ಹೋಗಿದ್ದ. ನಾನು ಬಂದು ತಡೆಯದಿದ್ದರೆ ನಿಮ್ ಮಾವಂಗೆ ಇಕ್ಕಿರೋನು ಎಂದು ಹೇಳಿದಾಗ,ಎಚ್.ಟಿ.ಮಂಜು ಬೆಂಬಲಿಗನಿಗೆ ಸಾರಂಗಿ ಮಂಜು ಅವನ್ಯಾರೋ ಹರಳಹಳ್ಳಿ ಮಂಜು ಎಂದು ಹೇಳುತ್ತಿದ್ದಂತೆ ಎಚ್.ಟಿ‌.ಮಂಜು ಬೆಂಬಲಿಗರ ಸಿಟ್ಟು ನೆತ್ತಿಗೇರಿ ಅಮ್ಮ,ಅಕ್ಕಾ ಎಂದೆಲ್ಲ ಕೆಟ್ಟ ಕೊಳಕಾಗಿ ಬೈಯುತ್ತಾರೆ. ನೀನು ಎಚ್.ಟಿ.ಮಂಜಣ್ಣನ ಋಣದಲ್ಲಿದ್ದೀಯ,ಅವರಿವರ ಹತ್ತಿರ ಕುಡ್ಕಂಡ್ ಓಡಾಡ್ತೀಯ ಎಂದೆಲ್ಲಾ ಅವರ ಬೆಂಬಲಿಗರು ಸಾರಂಗಿ ಮಂಜುಗೆ ಅವಾಚ್ಯವಾಗಿ ಹೇಳುತ್ತಾರೆ.

ಎಸ್.ಎಂ.ಲಿಂಗಪ್ಪ, ಕೆ.ಆರ್.ಪೇಟೆ ಕೃಷ್ಣರಂತಹ ಸಜ್ಜನ ರಾಜಕಾರಣಿಗಳಿದ್ದ ಕ್ಷೇತ್ರದಲ್ಲಿ ಹೀಗೆ ಚುನಾವಣೆಗೂ ಮುನ್ನವೇ ಕೆಟ್ಟ ಮಾತಿನ ಬೈಗುಳದ ಫೈಟ್ ನಡೆಯುತ್ತಿದೆ.ಮಂದೆನಾಗುವುದೋ ಎಂಬ ಆತಂಕ ಮೂಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!