ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಇಂಡುವಾಳು ಎಸ್.ಸಚ್ಚಿದಾನಂದ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.
ಹಾಗೆಯೇ ಗ್ರಾಮಸ್ಥರ ಮನವಿಯ ಮೇರೆಗೆ ಗ್ರಾಮದ ಮಸಣಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಆಟೋ ಚಾಲಕರಿಗೆ ಉಚಿತವಾಗಿ ಸಮವಸ್ತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳು, ಮುಖಂಡರಾದ ಮಾಯಿಗಯ್ಯ, ಸಂಜು, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸತೀಶ್ ಚಂದ್ರ, ಮರಕಾಡುದೊಡ್ಡಿ ಆನಂದ, ಬಿ.ಯರಹಳ್ಳಿ ಪ್ರಕಾಶ್, ಕಬ್ಬನಹಳ್ಳಿ ರಾಮಚಂದ್ರು, ಮತ್ತು ಗ್ರಾಮದ ಸೀನಪ್ಪ, ಸರ್ವೇಶ್, ಪುಟ್ಟಸ್ವಾಮಿ, ಕುಳ್ಳ ಚನ್ನಪ್ಪ, ಕುಶ, ಬೊಮ್ಮೇಶ್, ಬಿ.ಯರಹಳ್ಳಿ ವಿನೋದ್ ಹಾಗೂ ಯುವಕ ಮಿತ್ರರು ಉಪಸ್ಥಿತರಿದ್ದರು.