ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಹಮತ ನೀಡಿ, ಸಿದ್ದರಾಮಯ್ಯ ಅವರನ್ನು ಮತ್ತೇ ಮುಖ್ಯಮಂತ್ರಿಯನ್ನಾಗಿಸಿದ ನಾಡಿನ ಜನತೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೆ ಕೃತಜ್ಞತೆ ಸಲ್ಲಿಸಲು ತುಮಕೂರು ಜಿಲ್ಲೆಯ ಬೂದಿ ಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುತ್ತುರಾಯಪ್ಪ ಮೈಸೂರಿನ ಸಿದ್ದರಾಮನ ಹುಂಡಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಮುತ್ತರಾಯಪ್ಪ ಅವರ ಪಾದಯಾತ್ರೆ ಇಂದು ಮಂಡ್ಯ ನಗರವನ್ನು ತಲುಪಿತು.
ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು, ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಕುಸುಮ ಅವರಿಗೆ ಸಚಿವ ಸಂಪುಟದಲ್ಲಿ ಉತ್ತಮ ಸ್ಥಾನಮಾನ ನೀಡುವಂತೆ ಆಗ್ರಹಿಸಿದದರು.
ಇಂದು ಮಂಡ್ಯ ನಗರದಿಂದ ಮದ್ದೂರಿಗೆ ತೆರಳಿ, ಮದ್ದೂರಿನಲ್ಲಿ ವಾಸ್ತವ್ಯ ಹೂಡಿ ಬಳಿಕ ಹೆದ್ದಾರಿಯ ಮೂಲಕವೇ ಬೆಂಗಳೂರು ಸೇರುವುದಾಗಿ ಮಾಹಿತಿ ನೀಡಿದರು.