ಪ್ರಸ್ತುತ ದಿನಗಳಲ್ಲಿ ಪೋಷಕರನ್ನು ಕಡೆಗಣಿಸಿ ವಯಸ್ಸಾಗುತ್ತಿದ್ದಂತೆ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಜೆ.ಕೆ. ಗ್ರೂಪ್ಸ್ ಮಾಲೀಕ ಪ್ರಸಾದ್ ತಿಳಿಸಿದರು.
ಮದ್ದೂರು ತಾಲೂಕಿನ ಕೆ. ಹೊನ್ನಲಗೆರೆ ಗ್ರಾಮದ ದಿ.ಎಚ್.ಬಿ.ಜಯರಾಮು ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮದ್ದೂರು ತಾಲೂಕಿನ ಗಡಿಭಾಗದಲ್ಲಿರುವ ಶಿರಡಿ ಸಾಯಿ ಬಾಬಾ ವೃದ್ಧಾಶ್ರಮಕ್ಕೆ ಅಗತ್ಯವಿರುವ ದವಸ, ಧಾನ್ಯ ಹಾಗೂ ಊಟದ ವ್ಯವಸ್ಥೆಯನ್ನು ಕೈಗೊಂಡು ಅವರು ಮಾತನಾಡಿದರು.
ತಮ್ಮ ತಂದೆ ದಿ. ಎಚ್.ಬಿ.ಜಯರಾಮು ರವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಮಂದಿಗೆ ಸಹಕಾರಿಯಾಗಿದ್ದು ಅವರ ನೆನಪಿನಾರ್ಥವಾಗಿ ವೃದ್ಧಾಶ್ರಮಕ್ಕೆ ಆಹಾರದ ವ್ಯವಸ್ಥೆ ಕಲ್ಪಿಸುತ್ತಿರುವುದಾಗಿ ಹೇಳಿದರು.
ಐಶ್ವರ್ಯಕ್ಕಿಂತ ಆರೋಗ್ಯ ಮುಖ್ಯವಾದದ್ದು, ಆರೋಗ್ಯ, ಆರೋಗ್ಯವಿದ್ದಲ್ಲಿ ನೆಮ್ಮದಿ ಹಾಗೂ ಸುಖ ಜೀವನ ನಡೆಸಲು ಸಾಧ್ಯವಿದ್ದು, ಪ್ರತಿಯೊಬ್ಬರು ಉತ್ತಮವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಆರೋಗ್ಯ ವೃದ್ಧಿಗೆ ಮುಂದಾಗಬೇಕೆದರು.
ಈ ವೇಳೆ ಜೆ.ಕೆ. ಗ್ರೂಪ್ಸ್ ಮಾಲೀಕ ಪ್ರಮೋದ್, ಗ್ರಾಮಸ್ಥರಾದ ಸಂತೋಷ್, ಎಚ್.ಬಿ. ಸ್ವಾಮಿ, ರಮೇಶ್, ಮಹದೇವು, ಗುರುಮೂರ್ತಿ, ಉಪೇಂದ್ರ ಇತರರಿದ್ದರು.