Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಶ್ರೀಮಹಾಕಾಳಮ್ಮ ದೇವಸ್ಥಾನದ ಮಂಟಪ ಉದ್ಘಾಟನೆ

ಮದ್ದೂರು ತಾಲ್ಲೂಕು ಅಣ್ಣೂರು ಗ್ರಾಮದ ಶ್ರೀಮಹಾಕಾಳಮ್ಮ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮಹಾಕಾಳಮ್ಮನವರ ಮಂಟಪವನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಉದ್ಘಾಟಿಸಿದರು.

ನಂತರ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಮಾತನಾಡಿ, ನನ್ನ ಶಾಸಕತ್ವದ ಅವಧಿಯಲ್ಲಿ ದೇವಸ್ಥಾನದ ಅಭಿವೃದ್ದಿಗೆ ಅನುದಾನ ನೀಡಿದ್ದೆ, ಇದರಿಂದ ಶ್ರೀಮಹಾಕಾಳ್ಮನವರ ಮಂಟಪ ನಿರ್ಮಾಣಗೊಂಡಿದೆ. ಇದು ಭಕ್ತಾಧಿಗಳ ಸೇವೆಗೆ ಅನುಕೂಲ ಕಲ್ಪಿಸಲಿದೆ. ಎಲ್ಲರೂ ಸತ್ಯಧರ್ಮದಿಂದ ನಡೆದಾಗ ಮಾತ್ರ ನಾವು ಮುಕ್ತಿ ಕಾಣಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರು ದ್ವೇಷ-ಅಸೂಯೆಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಬೇಕೆಂದು ಕಿವಿಮಾತು ಹೇಳಿದರು.

ನನ್ನ ಅನುದಾನದೊಂದಿಗೆ ಗ್ರಾಮದ ಯುವ ಮುಖಂಡ ಯೋಗೇಂದ್ರ ವೈಯಕ್ತಿಕವಾಗಿ ಮತ್ತಷ್ಟು ಹಣವನ್ನು ಹಾಕಿ ಸುಸಜ್ಜಿತ ವಾದ ಮಂಟಪವನ್ನು ನಿರ್ಮಿಸಿರುವುದು ನನಗೆ ಸಂತಸ ತಂದಿದೆ ಎಂದರು.

ಇದೇ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಗ್ರಾಮಸ್ಥರು ಅಭಿನಂದಿಸಿ ಗೌರವಿಸಿದರು. ನಂತರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಮಹಾಕಾಳಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಮಹೇಶ್, ಪೂಜೆಗುಡ್ಡಪ್ಪ, ಪ್ರಕಾಶ್, ಕೆ.ಯೋಗೇಂದ್ರ, ಟಿ.ತಮ್ಮಣ್ಣ, ಚನ್ನಶೆಟ್ಟಿ, ಸುರೇಶ್, ಲಕ್ಷ್ಮಿಪತಿ, ಆಲಭುಜನಹಳ್ಳಿ ತ್ರಿಸೂಲ, ಪುಟ್ಟಶೆಟ್ಟಿ, ವಿನು, ಶಿವಲಿಂಗೇಗೌಡ, ಯಜಮಾನ್ ರಾಘು, ಶಂಕರ, ದೊರೆಸ್ವಾಮಿ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!