Thursday, September 19, 2024

ಪ್ರಾಯೋಗಿಕ ಆವೃತ್ತಿ

ಪತ್ರಕರ್ತರು ಸಂವೇದನಾಶೀಲತೆ, ಸಮಚಿತ್ತದಿಂದ ಕಾರ್ಯನಿರ್ವಹಿಸಬೇಕು – ಶಾಸಕ ಉದಯ್

ವರದಿ: ನ.ಲಿ ಕೃಷ್ಣ

ಪತ್ರಿಕಾ ವೃತ್ತಿ ಸವಾಲಿನದು ಮೆಲ್ನೊಟಕ್ಕೆ ಸುಖಕರವಾಗಿ ಕಂಡರೂ, ವಾಸ್ತವ ಸಂಗತಿ ಬೇರೆಯೆ ಇದ್ದು, ನೆರೆ ಬರ ಕಷ್ಠ ನಷ್ಠಗಳ ಸಂದರ್ಭದಲ್ಲಿ ಮೊದಲಿಗೆ ಪತ್ರಕರ್ತರು ಧಾವಿಸಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಾರೆ, ಇಂತಹ ವೃತ್ತಿಯಲ್ಲಿ ತೊಡಗಿಸಿಕೊಂಡಿಹ ಪತ್ರಕರ್ತರಿಗೆ ಸಮಾಜದ ಗೌರವ ಸಲ್ಲಬೇಕು ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ ಎಂ ಉದಯ್ ತಿಳಿಸಿದರು

ಮದ್ದೂರು ತಾಲ್ಲೂಕು ಪತ್ರಕರ್ತರ ಸಂಘದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ತಮ್ಮ ವೃತ್ತಿ ಧರ್ಮಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಹಿತ ನುಡಿಗಳನ್ನಾಡಿದರು

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದಂತೆಯೇ ಪತ್ರಿಕಾ ರಂಗಕ್ಕೂ ತನ್ನದೆ ಆದ ಜವಾಬ್ದಾರಿಗಳಿವೆ, ಇದನ್ನರಿತು ಕಾರ್ಯ ನಿರ್ವಹಿಸಬೇಕು. ಪತ್ರಕರ್ತರು ಸಂವೇದಾನಶೀಲತೆಯೊಂದಿಗೆ ಸಮಚಿತ್ತದಿಂದ ಸತ್ಯಪರತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.

ಸಮಾಜದ ಎಲ್ಲಾ ವರ್ಗದ ಜನರ ಹಿತಕ್ಕಾಗಿ ಶ್ರಮಿಸುತ್ತಿರುವಂತೆಯೇ ಪತ್ರಕರ್ತರ ಹಿತವು ನನಗೆ ಮುಖ್ಯವಾಗಿದೆ,  ಅದಕ್ಕಾಗಿ ಪತ್ರಕರ್ತರ ಸಂಘಕ್ಕೆ ಅಗತ್ಯವಾದ ನಿವೇಶನ ಮತ್ತು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿ ಅದರ ಯಶಸ್ಸಿನೊಟ್ಟಿಗೆ ಇರುವುದಾಗಿ ತಿಳಿಸಿದ ಅವರು, ಮದ್ದೂರಿನ ಪತ್ರಕರ್ತರ ಸಂಘ ರಾಜ್ಯಕ್ಕೆ ರಾಷ್ಟ್ರಕ್ಕೆ ಮಾದರಿಯಾಗುವಂತೆ ಕಾರ್ಯ ನಿರ್ವಹಿಸಬೇಕೆಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತಿಕೆರೆ ಜಯರಾಮ್ ಮಾತನಾಡಿ, ಪತ್ರಕರ್ತರು ಸತ್ಯಪ್ರತಿಪಾದನೆ ಮಾಡುತ್ತಾ ನ್ಯಾಯಪರತೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ಹಿಂದೆ ಮಾಧ್ಯಮದ ವರದಿಗೆ ಅಧಿಕಾರಿ ವರ್ಗ ಸ್ಪಂದಿಸುತ್ತಿತ್ತು, ಆದರೆ ಇಂದಿನ ದಪ್ಪನೆಯ ಚರ್ಮದ ಅಧಿಕಾರಿಗಳು, ರಾಜಕಾರಣಿಗಳು ಮಾಧ್ಯಮದ ವರದಿಗೆ ಸ್ಪಂದಿಸದಿರುವುದು ವಿಷಾದದ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಉದಾಹರಣೆಯಾಗಿ ಮದ್ದೂರು ಚನ್ನಪಟ್ಟಣದ ನಡುವೆ ಷಟಲ್ ಬಸ್ ಗಳ ವ್ಯವಸ್ಥೆ ಇಲ್ಲದ ಬಗ್ಗೆ ನಿರಂತರ ವರದಿ ಮಾಡುತ್ತಿದ್ದರು, ಈ ಭಾಗದವರೇ ಸಾರಿಗೆ ಮಂತ್ರಿಗಳು ಇದ್ದ ಸಂದರ್ಭಕ್ಕೂ ಬಸ್ ವ್ಯವಸ್ಥೆ ಆಗಲೇ ಇಲ್ಲ ಇಂದಿಗೂ ಅದೆ ಸಮಸ್ಯೆ ಮುಂದುವರೆದಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಪಿ ನಂದೀಶ್ ವಾರ್ಷಿಕ ವರದಿ ಮಂಡಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ  ಶಿವನಂಜಪ್ಪ ಪ್ರಾಸ್ತವಿಕ ನುಡಿಗಳನ್ನಾಡಿ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿ. ಮತ್ತಿಕೆರೆ ಜಯರಾಂ ಅವರು ಪತ್ರಕರ್ತರ ಸಂಘದಲ್ಲಿ ಇಡುಗಂಟು ಇಡುವ ಮೂಲಕ ಪತ್ರಕರ್ತರ ಸಂಕಷ್ಠದ ಸಮಯದಲ್ಲಿ ನೆರವಾಗುವ, ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಸಂಘಟಿತ ಪ್ರಯತ್ನ ಮಾಡಲಾಗುತ್ತಿದೆ.ಮದ್ದೂರಿನ ಪತ್ರಕರ್ತರ ಸಂಘಕ್ಕೆ ನಿವೇಶನ ಹೊಂದುವ ಕನಸು ಈಡೇರಿಲ್ಲ ಮದ್ದೂರಿನ ಶಾಸಕರು ಈ ನಿಟ್ಟಿನಲ್ಲಿ ಸಹಕರಿಸಿ ನಿವೇಶನ ಒದಗಿಸಬೇಕೆಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ ಪಿ ಪ್ರಕಾಶ್, ಕಾರ್ಯದರ್ಶಿ ಸೊಮಶೆಖರ್ ಕೆರೆಗೋಡು, ರಾಷ್ಟ್ರ ಸಮಿತಿ ಸದಸ್ಯರಾದ ಸಿ ಎನ್ ಮಂಜುನಾಥ್, ಜೆ ಎಮ್ ಬಾಲಕೃಷ್ಣ, ಮಂಜುಳಾ ಕಿರುಗಾವಲು, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ರವಿ ಸಾವಂದಿಪುರ, ಕೆ ಎನ್ ನವೀನ್ ಕುಮಾರ್, ಖಜಾಂಚಿ ಆರ್ ಎನ್ ನಂಜುಂಡ ಸ್ವಾಮಿ, ಕಾರ್ಯದರ್ಶಿಗಳಾದ ಬಿ ಎಸ್ ಜಯರಾಮು, ಚಿನಕುರುಳಿ ಲೊಕೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ ಸಿ ಮಂಜುನಾಥ, ನಿರ್ದೆಶಕ ಅಣ್ಣೂರು ಸತೀಶ್ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಪುಟ್ಟಸ್ವಾಮಿ ಅವರು, ಪತ್ರಿಕಾ ದಿನಾಚರಣೆಯ ಯಶಸ್ಸಿಗೆ ಶ್ರಮಿಸಿದವರಿಗೆ ಎಲ್ಲಾರಿಗೂ ಧನ್ಯವಾದ ತಿಳಿಸಿ, ಮುಂದಿನ ದಿನದಲ್ಲಿಯು ಸಹಕಾರ ಇರಲಿ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಕ್ರಪಾಣಿ, ಎಮ್ ಆರ್ ಆಶೊಕ್ ಕುಮಾರ್, ಚಾಮನಹಳ್ಳಿ ಮಂಜು, ಖಜಾಂಚಿ ವಿ ಎಸ್ ಪ್ರಭು, ಎಸ್ ಕೆ ಸುಂದರ್ ರಾಜ್, ಹೆಚ್ ಜಿ ರವಿಕುಮಾರ್, ಎಮ್ ಪಿ ವೆಂಕಟೇಶ್, ಸಿ ಹರೀಶ್, ಎಲ್ ಡಿ ನಾಗರಾಜ್, ಅಂಬರಹಳ್ಳಿ ಸ್ವಾಮಿ, ಯು ಎಸ್ ಶಿವಕುಮಾರ್, ಕೃಷ್ಣ, ಸಾವಂದಿಪುರ ಕೆ ಎಸ್ ಮಧು, ಮಹದೇವು, ನಾಗಮ್ಮ, ಆರ್ ಸುನಿಲ್ ಕುಮಾರ್, ಎ ಆರ್ ಆನಂದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಾದ ಪ್ರಭು ವೈಧ್ಯನಾಥಪುರ ಹಾಗೂ ನಗರಕೆರೆ ಪ್ರಮೊದ್ ಪ್ರತಿಭಾನ್ವಿತ ವಿಧ್ಯಾರ್ಥಿಗಳಾದ ವರ್ಷಿಣಿ ಹಾಗು ಪಂಚಮಿ ಅವರನ್ನು ಸನ್ಮಾನಿಸಲಾಯಿತು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!