ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿಯ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಅವರ ನಿರ್ಣಯ ಅತ್ಯಂತ ಮುಖ್ಯವಾಗಿದ್ದು, ಆ ಕಾರಣದಿಂದ ಸ್ವಂತ ಬಲದ ಸರ್ಕಾರವಿಲ್ಲದ ಬಿಜೆಪಿಗೆ ಸ್ವೀಕರ್ ಹುದ್ದೆ ಅಗತ್ಯವಾಗಿದ್ದು, ಸ್ಪೀಕರ್ ಹುದ್ದೆ ತಮ್ಮ ಬಳಿ ಇಲ್ಲದೆ ಹೋದರೆ ಸರ್ಕಾರ ನಡೆಸುವುದು ಕಷ್ಟ ಎಂದು ಅರಿತಿರುವ ಬಿಜೆಪಿ ತಮಗೆ ಸ್ಪೀಕರ್ ಹುದ್ದೆ ಬೇಕೆಂದು ಪಟ್ಟು ಹಿಡಿದಿದೆ.
ಅದೇ ಸಂದರ್ಭದಲ್ಲಿ ಮಿತ್ರ ಪಕ್ಷಗಳನ್ನು ಸಹ ಒಡೆದು ಹಾಕಿಬಿಡಬಹುದೆಂಬ ಲೆಕ್ಕಾಚಾರದಲ್ಲಿರುವ ತೆಲಗುದೇಶಂ ಸ್ಪೀಕರ್ ಹುದ್ದೆ ತನಗೆಬೇಕು ಎಂದು ಹಠ ಹಿಡಿದು ಕೂತಿದೆ.
ಇವುಗಳೆಲ್ಲದರ ಮಧ್ಯೆ ಇಂಡಿಯಾ ಒಕ್ಕೂಟದ ಪಕ್ಷಗಳು ನಿರ್ಣಯ ಮಾಡಿ, ತೆಲಗುದೇಶಂ ಪಕ್ಷ ಯಾರನ್ನು ಸ್ಪೀಕರ್ ಹುದ್ದೆಗೆ ನಿಲ್ಲಿಸಿದರು ಅವರಿಗೆ ನಮ್ಮ ಬೆಂಬಲ ನೀಡುವುದುದಾಗಿ ತಿಳಿಸಿ, ಇದು ಪ್ರಜಾಪ್ರಭುತ್ವದ ಪ್ರಶ್ನೆ ಎಂದು ನಿರ್ಣಯ ಕೈಗೊಂಡಿದೆ.
ಹಾಗಾಗಿ ಸ್ಪೀಕರ್ ಸ್ಥಾನ ಯಾವ ಪಕ್ಷದ ಪಾಲಾಗುತ್ತದೆ ಕುತೂಹಲಕ್ಕೆ ಕಾರಣವಾಗಿದೆ.