ತುಮಕೂರು ಸಿದ್ದಗಂಗಾ ಯೂನಿವರ್ಸಿಟಿಯಲ್ಲಿ ನಡೆದ 6 ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮಂಡ್ಯದ ಗೋಜು ರಿಯೂ ಕರಾಟೆ ದೋಜೊ ಹಾಗೂ ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ ಎಂದು ಕರಾಟೆ ಸಂಸ್ಥೆಯ ಅಧ್ಯಕ್ಷ ಲೋಕೇಶ್ ಮೊದಲಿಯಾರ್ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಮಂಡ್ಯ ಜಿಲ್ಲೆಯಿಂದ ಸುಮಾರು 45 ವಿದ್ಯಾರ್ಥಿಗಳು ಭಾಗವಹಿಸಿ ಕಥಾ ಹಾಗೂ ಕುಮತೆ ವಿಭಾಗಗಳಲ್ಲಿ ಬಾಲಕ, ಬಾಲಕಿಯರು ಸುಮಾರು 40 ಪ್ರಶಸ್ತಿಗಳನ್ನು ಗೆದ್ದು ತುಮಕೂರು ಓಪನ್ ಚಾಂಪಿಯನ್ಶಿಪ್ ಟ್ರೋಪಿಯನ್ನು ಮಂಡ್ಯದ ತಂಡ ಪಡೆಯುವಲ್ಲಿ ಯಶಸ್ವಿಯಾಯಿತು.
ಈ ಸ್ಪರ್ಧೆಯಲ್ಲಿ ಮಂಡ್ಯದ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತುರಾದ ಪ್ರತಾಪ್ ಕುಮಾರ್, ಶರತ್ ಕುಮಾರ್, ಗೌತಮ್, ಬಸವಸಾಗರ್, ಯಶಸ್ ಚಿನ್ಮಯ್, ಹಂಸಪ್ರಿಯ, ಶಿವರಂಜಿನಿ ಇತರರು ಭಾಗವಹಿಸಿದ್ದರು.