ಮಂಡ್ಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಆಯಾ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯದಲ್ಲಿಂದು, ಕೆ.ಆರ್.ಎಸ್. ಪಕ್ಷದ ಜಿಲ್ಲಾ ಉಸ್ತುವಾರಿ ಲಿಂಗೇಗೌಡ ಎಸ್ ಎಚ್ ರ ನೇತೃತ್ವದಲ್ಲಿ ಚರ್ಚೆ ನಡೆಯಿತು.
ಜಿಲ್ಲೆಯ ಏಳು ಕ್ಷೇತ್ರದ ಎಂ.ಎಲ್.ಎ ಅಭ್ಯರ್ಥಿಗಳ ಸಭೆ ಕರೆದು, ಚುನಾವಣೆ ಪ್ರಚಾರ ತಯಾರಿ ಹಾಗು ಚುನಾವಣೆ ಅಕ್ರಮಗಳನ್ನು ಯಾವೆಲ್ಲ ರೀತಿಯಲ್ಲಿ ತಡೆಯಬಹುದಾದ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಇದೆ ಸಂದರ್ಭದಲ್ಲಿ ಎಲ್ಲ ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ತುಂಬಾ ಪರಿಣಾಮಕಾರಿಯಾಗಿ ಮಾಡಲು ಮಾರ್ಗದರ್ಶನ ನೀಡಲಾಯಿತು.
ಕೆಆರ್’ಎಸ್ ಪಕ್ಷದ ಅಭ್ಯರ್ಥಿಗಳಾಗಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಅರುಣಕುಮಾರ ಹೆಚ್.ಎಂ (ಕ್ರಮ ಸಂಖ್ಯೆ – 7), ನಾಗಮಂಗಲ ಕ್ಷೇತ್ರದಿಂದ ರಮೇಶ್ ಗೌಡ (ಕ್ರಮ ಸಂಖ್ಯೆ – 7), ಮೇಲುಕೋಟೆ ಕ್ಷೇತ್ರದಿಂದ ಮಹೇಂದ್ರ ಕುಮಾರ್ (ಕ್ರಮ ಸಂಖ್ಯೆ – 6), ಕೆ.ಆರ್ ಪೇಟೆ ಕ್ಷೇತ್ರದಿಂದ ಕಿಶೋರ ಎ ಸಿ (ಕ್ರಮ ಸಂಖ್ಯೆ – 6), ಮಂಡ್ಯ ಕ್ಷೇತ್ರದಿಂದ ಡಿ.ಜಿ ನಾಗರಾಜು (ಕ್ರಮ ಸಂಖ್ಯೆ – 6), ಮದ್ದೂರು ಕ್ಷೇತ್ರದಿಂದ ಕೆ.ಜೆ ಮಹೇಶ್ (ಕ್ರಮ ಸಂಖ್ಯೆ – 6)
ಹಾಗೂ 7) ಮಳವಳ್ಳಿ ಕ್ಷೇತ್ರದಿಂದ ನಂದೀಶ್ ಕುಮಾರ್ ಎಮ್ (ಕ್ರಮ ಸಂಖ್ಯೆ – 7) ಅವರನ್ನು ಕಣಕ್ಕೆ ಇಳಿಸಲಾಗಿದೆ.