Thursday, September 19, 2024

ಪ್ರಾಯೋಗಿಕ ಆವೃತ್ತಿ

ನ್ಯಾಯಮೂರ್ತಿಗಳಿಗೆ ಚುನಾವಣೆಯ ಹಂಗಿಲ್ಲ: ಸಚಿವ ರಿಜಿಜು ನಿರಂತರ ವಾಗ್ದಾಳಿ

ನಮ್ಮ ದೇಶದಲ್ಲಿ ಚುನಾವಣೆಗಳನ್ನು ಎದುರಿಸುವ ಯಾವುದೇ ಜವಾಬ್ದಾರಿ ನ್ಯಾಯಾಂಗಕ್ಕಿಲ್ಲ. ಹಾಗಾಗಿ ನ್ಯಾಯಮೂರ್ತಿಗಳಿಗೆ ಯಾವುದೇ ಚುನಾವಣೆಗಳ ಹಂಗು ಬೇಕಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ನ್ಯಾಯಾಂಗ ವ್ಯವಸ್ಥೆಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ವಕೀಲರ ಸಂಘದಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೇಶದ ಜನ ನ್ಯಾಯದ ತೀರ್ಮಾನಗಳನ್ನು ನೋಡುತ್ತಿದ್ದಾರೆ. ನೀವೆಲ್ಲ ಹೇಗೆ ಕೆಲಸ ಮಾಡುತ್ತೀರ, ನಿಮ್ಮ ಅಭಿಪ್ರಾಯಗಳು ಏನು ಎಂಬುದರ ಮೇಲೆ ಜನರು ತಮ್ಮ ಅಭಿಪ್ರಾಯಗಳನ್ನು ರೂಪಿಸುತ್ತಾರೆ. ಸಾಮಾಜಿಕ ಜಾಲದಲ್ಲಿ ಯಾರೂ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ನ್ಯಾಯಾಂಗವನ್ನು ಟೀಕಿಸಿದ್ದಾರೆ.

ಯಾರಾದರೂ ನ್ಯಾಯಮೂರ್ತಿಗಳನ್ನು ಟೀಕಿಸಿದರೆ ಅಂಥವರ ವಿರುದ್ದ ಕಾನೂನು ಕ್ರಮ ತೆದುಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿರುವುದು ನಮಗೆ ಅಂತಲೂ ತಿಳಿದಿದೆ. ಆದರೆ ಪ್ರತಿಯೊಬ್ಬ ನಾಗರೀಕನಿಗೂ ಇದನ್ನು ಅನ್ವಯಿಸಲಾಗದು. ಅವರು ಪ್ರಶ್ನಿಸುತ್ತಲೇ ಇರುತ್ತಾರೆ. ಅವರಿಗೆ ಶಾಸಕಾಂಗ ಹೇಗೆ ಉತ್ತರಿಸುತ್ತದೋ ಹಾಗೆಯೇ ನ್ಯಾಯಾಂಗವು ಉತ್ತರಿಸುವಂತಾಗಬೇಕು ಎಂದು ನ್ಯಾಯಾಂಗದ ವಿರುದ್ಧ ದಾಳಿ ನಡೆಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!