Thursday, September 19, 2024

ಪ್ರಾಯೋಗಿಕ ಆವೃತ್ತಿ

ದಿವಂಗತ ಎಸ್.ಮಧುಸೂದನ್ ರವರ ಕುಟುಂಬಕ್ಕೆ ಸಹಾಯ ಹಸ್ತ

ಇತ್ತೀಚಿಗೆ ವಿದ್ಯುತ್ ಅವಘಡದಿಂದ ನಿಧನ ಹೊಂದಿದ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಛಾಯಾಗ್ರಹಕರಾದ ದಿವಂಗತ ಎಸ್.ಮಧುಸೂದನ್ ರವರ ಕುಟುಂಬಕ್ಕೆ ಚನ್ನಪಟ್ಟಣ ತಾಲ್ಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಕ್ಷೇಮಾಭಿವೃದ್ಧಿ ಸಂಘವು 16000 ರೂ ಗಳನ್ನು ಸಹಾಯ ಹಸ್ತವಾಗಿ ನೀಡಿತು.

ಈ ಸಂದರ್ಭದಲ್ಲಿ ಚನ್ನಪಟ್ಟಣ ತಾಲೂಕು ಸಂಘದ ಪದಾಧಿಕಾರಿಗಳಾದ ರಾಜು, ಪ್ರದೀಪ್, ರವಿ, ಅನಿಲ್, ಜಗದೀಶ್ ಹಾಗೂ ಮದ್ದೂರು ತಾಲೂಕು ಛಾಯಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಗುರುರಾಘವರವರು ಉಪಸ್ಥಿತರಿದ್ದರು.

ಸಹಾಯಸ್ತ ನೀಡಿದ ಚನ್ನಪಟ್ಟಣ ತಾಲೂಕು ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪ್ರದೀಪ್ ರವರಿಗೆ ಮತ್ತು ಕಾರ್ಯಕಾರಿ ಮಂಡಳಿಯವರಿಗೆ ಚನ್ನಪಟ್ಟಣ ತಾಲ್ಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಕ್ಷೇಮಾಭಿವೃದ್ಧಿ ಸಂಘಕ್ಕೆ ದರ್ಶನ್ ಗೌಡ ಮಾಜಿ ಅಧ್ಯಕ್ಷರು ಛಾಯಾ ಕ್ಷೇಮಾಭಿವೃದ್ಧಿ ಸಂಘ, ಮದ್ದೂರು ತಾಲೂಕು ಇವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!