ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಹಾಡ್ಯ ಗ್ರಾಮದ ಪರಿಮಿತಿಯಲ್ಲಿ 49 ಲಕ್ಷ ರೂ.ಗಳ ಶಾಸಕರ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಮಾನ್ಯ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕ ಸಿ ಎಸ್ ಪುಟ್ಟರಾಜು ಗುದ್ದಲಿ ಪೂಜೆ ನೆರವೇರಿಸಿದರು.
ವಾಟರ್ ಟ್ಯಾಂಕ್ ನಿಂದ ಜೋಗಿಗೌಡರ ನಾಗರಾಜು ಅವರ ಮನೆಯವರೆಗೆ ರಸ್ತೆ ಮತ್ತು ಚರಂಡಿ ಹಾಗೂ ಲಕ್ಷ್ಮಣ ಮನೆಯಿಂದ ಗಂಗಾಮತಸ್ಥರ ಬೀದಿಯವರೆಗೆ ಚರಂಡಿ ಮತ್ತು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಎಚ್ಆರ್ ಆತ್ಮಾನಂದ ಮತ್ತು ಗೌರಮ್ಮ ಉಮೇಶ್, ಮುಖಂಡರಾದ ಪುಟ್ಟಸ್ವಾಮಿ, ಕೆ ಪಿ ಅನಿಲ್ ಕುಮಾರ್, ದೇವೇಗೌಡ, ಯಜಮಾನ್ ಬೋರಯ್ಯ, ಎಚ್ ಬಿ ಜವರೇಗೌಡ, ಎಚ್ ಕೆ ಬೋರೇಗೌಡ ಉಪಸ್ಥಿತರಿದ್ದರು.