ಮದ್ದೂರಿನ ಪ್ರಗತಿಪರ ಸಂಘಟನೆಗಳ ವತಿಯಿಂದ ”ಕುವೆಂಪು ಜಯಂತಿ” ಹಾಗೂ ”ಈ ದಿನ .ಕಾಮ್ ಡಿಜಿಟಲ್ ಮಾಧ್ಯಮದ ಆಪ್ ಬಿಡುಗಡೆ ಸಮಾರಂಭವು ಮದ್ದೂರು ಪಟ್ಟಣದ ಭೂ ಬ್ಯಾಂಕ್ ಸಭಾಂಗಣದಲ್ಲಿ ಡಿ.29ರಂದು ಮಧ್ಯಾಹ್ನ 2.30 ಗಂಟೆಗೆ ನಡೆಯಲಿದೆ.
ಮದ್ದೂರು ತಹಶೀಲ್ದಾರ್ ನರಸಿಂಹ ಮೂರ್ತಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಪತ್ರಕರ್ತ ಕುಂಟನಹಳ್ಳಿ ಮಲ್ಲೇಶ್ ”ಈ ದಿನ .ಕಾಮ್ ಡಿಜಿಟಲ್ ಮಾಧ್ಯಮ ಆಪ್ ಬಿಡುಗಡೆ ಮಾಡಿ, ಶುಭ ಕೋರುವರು. ‘ಮದ್ದಿನಮನೆ ನೆರವಿಗರ ಕೂಟ’ಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ ಚಾಲನೆ ನೀಡುವರು.
ಮುಖ್ಯ ಅತಿಥಿಗಳಾಗಿ ಅರಕ್ಷಕ ನಿರೀಕ್ಷಕ ಸಂತೋಷ್ ಕುಮಾರ್. ವೈದ್ಯಾಧಿಕಾರಿ ಡಾ.ಬಾಲಕೃಷ್ಣ, ಗ್ರಾ ಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಜಿ ಎನ್ ಸತ್ಯ ಭಾಗವಹಿಸುವರು.