Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಆಯೋಧ್ಯೆ : ಅಕ್ಷತೆ ಹಂಚಿ ಭಕ್ತಿಭಾವ ಮೆರೆದ ಶ್ರೀರಾಮಭಕ್ತರು

ಆಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ಸಂಬಂಧ ಆಯೋಧ್ಯೆಯಿಂದ ಬಂದಿದ್ದ ಅಕ್ಷತೆಯನ್ನು ಪ್ರತಿ ಮನೆಗೆ ತೆರಳಿ ಶ್ರದ್ದೆ ಭಕ್ತಿಯಿಂದ ಹಂಚಿ ಶ್ರಿ ರಾಮಭಕ್ತರು ಭಕ್ತಿ ಭಾವ ಮೆರೆದರು.

ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮದಲ್ಲಿ ಮುಂಜಾನೆಯೇ ಶ್ರೀರಾಮ ಮಂದಿರಕ್ಕೆ ಪೂಜೆಸಲ್ಲಿಸಿ ಜೈ ಶ್ರೀ ರಾಮ್ ಎಂಬ ಉದ್ಘೋಷ ಮೊಳಗಿಸಿ ಭಕ್ತಿಯಿಂದ ಮನೆ ಮನೆಗೆ ತೆರಳಿ, ಅಕ್ಷತೆ, ಶ್ರೀರಾಮನ ಭಾವಚಿತ್ರ ಹಾಗೂ ಅಕ್ಷತೆ ಮತ್ತು ಶ್ರೀ ರಾಮ ಮಂದಿರ ಕುರಿತ ವಿವರಣೆಯುಳ್ಳ ಕರಪತ್ರ ಹಂಚಿಕೆ ಮಾಡಿದರು.

ಅಕ್ಷತೆ ಹಂಚಿಕೆ ಕಾರ್ಯಕ್ಕೆ ಅರ್ಚಕರಾದ ಸದಾಶಿವಸ್ವಾಮಿಗಳು ಚಾಲನೆ ನೀಡಿದರು.
ಎನ್. ಸಿ. ರಾಮು, ಜಯರಾಮು, ಶಿವಾನಂದ, ರವಿ, ಸಿದ್ದೇಶ್, ಪ್ರಜ್ವಲ್, ಎನ್. ಬಿ. ಚಿರಾಗ್, ಶ್ರೇಯಸ್ ಗೌಡ, ಎನ್ ಎಚ್ ಚಂದ್ರು ಎಸ್. ಎಲ್ ರಮೇಶ್, ಸೊಂಪುರ ವೈಧ್ಯೇಶ್ ಗೌಡ ವಿಕಾಸ್ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!