Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಪ್ರೇಯಸಿ ಕರೆದುಕೊಂಡು ಬರಲು ಅಕ್ಕನ ಕೊಲೆ ಮಾಡಿದ : ತಂಗಿ ರುಕ್ಸಾನ ಆರೋಪ

ಮದುವೆಗೂ ಮುನ್ನೇ ಇನ್ನೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮ ಭಾವ, ಪ್ರೇಯಸಿನ ಕರೆದುಕೊಂಡು ಬರುವುದಕ್ಕಾಗಿ ಅಕ್ಕನನ್ನು ಕೊಲೆ ಮಾಡಿದ್ದಾನೆಂದು ಉಸ್ಮಾ ಕೌಸರ್ ಅವರ ತಂಗಿ ರುಕ್ಸಾನ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ವೆಗೂ ಮುಂಚೆ ಭಾವ ಆಖಿಲ್ ಅಹಮದ್ ಇನ್ನೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅಕ್ಕನನ್ನು ಸರಿಯಾಗಿ ನೋಡ್ಕೊಳ್ತಿರಲಿಲ್ಲ, ಇಟ್ಟುಕೊಂಡಿದ್ದವಳಿಗೆ ಬಟ್ಟೆ ಬರೆ ತೆಗೆದುಕೊಂಡು ಹೋಗುತ್ತಿದ್ದ. ಇದನ್ನು ಅಕ್ಕ ಪ್ರಶ್ನೆ ಮಾಡಿದಾಗ, ಅವಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಜಗಳ ತೆಗೆಯುತ್ತಿದ್ದ, ಅಲ್ಲದೇ ಮಕ್ಕಳನ್ನು ಸರಿಯಾಗಿ ನೋಡಿಕೊಳ್ತಿರಲಿಲ್ಲ, ಈ ಎಲ್ಲವನ್ನು ಭಾವನ ತಂದೆ ತಾಯಿ ಅವರು ಪ್ರಶ್ನಿಸುತ್ತಿರಲಿಲ್ಲ ಎಂದು ದೂರಿದರು.

ಆಗಾಗ ಅಕ್ಕನಿಗೆ ಹೊಡೆಯುತ್ತಿದ್ದ. ಮಕ್ಕಳನ್ನು ದೂರ ತಳ್ಳುತ್ತಿದ್ದ. ಇಟ್ಟುಕೊಂಡವಳ ಗಂಡನನ್ನು ಸಾಯಿಸಿ ಅವಳೊಂದಿಗೆ ಇರುತ್ತೇನೆ ಎಂದು ಪಟ್ಟು ಹಿಡಿದಿದ್ದ. ಇದರಿಂದ ನೊಂದಿದ್ದ ಅಕ್ಕ ಮಕ್ಕಳಿಗೂ ವಿಷ ಉಣಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಆತ್ಮಹತ್ಯೆಯಲ್ಲ ಭಾವನೇ ಮಾಡಿದ ಕೊಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿದರು.

ಸ್ಟೇಷನ್ನಲ್ಲಿ ರಾಜ ಮಾರ್ಯಾದೆ

ನನ್ನ ಅಕ್ಕ ಹಾಗೂ ಮಕ್ಕಳನ್ನು ಕೊಂದ ಭಾವನಿಗೆ ಮದ್ದೂರು ಪೊಲೀಸ್ ಸ್ಟೇಷನ್ನಿನಲ್ಲಿ ರಾಜ ಮಾರ್ಯಾದೆ ಸಿಗುತ್ತಿದೆ, ಪೊಲೀಸರು ಒಳ್ಳೆ ಟ್ರೀಟ್ ಮಾಡ್ತೀದ್ದಾರೆ. ಇನ್ಯಾರೋ ಬಡವರ ಹುಡುಗನ್ನ ಜೈಲಿಗೆ ಹಾಕಿದ್ದಾರೆಂದು ಕಿಡಿಕಾರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!