Thursday, September 19, 2024

ಪ್ರಾಯೋಗಿಕ ಆವೃತ್ತಿ

ಚರ್ಮರೋಗ ತಜ್ಞರ ನಿಯೋಜನೆ : ನೆರವಿಗರ ಕೂಟಕ್ಕೆ ಡಿಎಚ್ಓ ಸ್ಫಂದನೆ

ಮದ್ದಿನಮನೆ ನೆರವಿಗರ ಕೂಟದ ಮನವಿಗೆ ಸ್ಪಂದನೆ ನೀಡಿ ಕ್ರಮ ವಹಿಸಿದ ಡಿಎಚ್ಓ ಮದ್ದೂರು ಸರ್ಕಾರಿ ಆಸ್ಪತ್ರೆಗೆ ಚರ್ಮರೋಗ ತಜ್ಞರಾದ ಡಾ.ವಿನೋದ್ ಅವರನ್ನು ನಿಯೊಜನೆ ಮಾಡಿ ಆದೇಶ ಹೊರಡಿಸಲಾಗಿದ್ದು, ಪ್ರತಿ ಮಂಗಳವಾರ ಹಾಗು ಶನಿವಾರದಂದು ಇವರು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವಾ ಡಿಎಚ್ಓ ಡಾ.ಧನಂಜಯ್ ಅವರು ಮದ್ದೂರಿನ ಸರ್ಕಾರಿ ಆಸ್ಪತ್ರೆ ಸುಧಾರಣೆಗಾಗಿ ಕಾರ್ಯ ನಿರ್ವಹಿಸುತಿರುವ ಸ್ವಯಂ ಸೇವಾ ತಂಡ “ಮದ್ದಿನಮನೆ ನೆರವಿಗರ ಕೂಟ” ದ ಸದಸ್ಯರ ಮನವಿ ಮೇರೆಗೆ ಚರ್ಮರೋಗ ತಜ್ಞರ ನಿಯೊಜನೆ ಮಾಡಲಾಗಿದೆ ಎಂದಿದ್ದಾರೆ.

nudikarnataka.com

ಕಳೆದ ವಾರವಷ್ಠೇ ಮದ್ದಿನಮನೆ ನೆರವಿಗರ ಕೂಟಕ್ಕೆ ಡಾ ಧನಂಜಯ್ ಅವರು ಚಾಲನೆ ನೀಡಿದ್ದರು. ಈ ವೇಳೆ ಮದ್ದೂರು ಆಸ್ಪತ್ರೆಯ ಅಭಿವೃದ್ಧಿಗಾಗಿ ನಾವು-ನೀವು ಒಟ್ಟಾಗಿ ಶ್ರಮಿಸೋಣ ಎಂದಿದ್ದರು

ಅದರಂತೆ ಸ್ಪಂದನೆ ನೀಡುತ್ತಿರುವುದು ಶ್ಲಾಘನೀಯ ಎಂದಿರುವ ಪುರಸಭೆ ಮಾಜಿ ಅಧ್ಯಕ್ಷರು, ನೆರವಿಗರ ಕೂಟದ ಸದಸ್ಯರು ಆದ ಶೇಖರ್ ಇದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!