“ಹದರಿಸಿ, ಬೆದರಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ನಮ್ಮ ಬಳಿ ಇದ್ದಾಗ ಭ್ರಷ್ಟರು ಎನ್ನುತ್ತಾರೆ. ಬಳಿಕ ಅವರನ್ನೇ ಪಕ್ಷಕ್ಕೆ ಎಳೆದುಕೊಂಡು ಪ್ರಮಾಣಿಕರು ಎನ್ನುತ್ತಾರೆ. ದೇಶದಲ್ಲಿ ನಿರಂಕುಶ ನಾಯಕತ್ವ ಮತ್ತು ಸರ್ವಾಧಿಕಾರ ಆಡಳಿತ ತರಲು ಮೋದಿ ಹವಣಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೆಲವರು ಮೋದಿ ಇದ್ದರೆ ಮಾತ್ರ ದೇಶ ನಡೆಯುತ್ತದೆ ಎಂಬ ಗುಂಗಿನಲ್ಲಿದ್ದಾರೆ. ಹಲವಾರು ನಾಯಕರು ದೇಶ ಕಟ್ಟಿದ್ದಾರೆ. ಆದರೆ, ಮೋದಿಯವರನ್ನು ಜಾಹೀರಾತು ಸರ್ಕಾರ. ಅವರೇನು ಮಾಡುತ್ತಿಲ್ಲ” ಎಂದರು.