Friday, September 20, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಚಂಡೀಗಢ ಚುನಾವಣಾ ಅಕ್ರಮ ಸಾಕ್ಷಿ: ಮಲ್ಲಿಕಾರ್ಜುನ ಖರ್ಗೆ

ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಎಲ್ಲರಿಗೂ ಸಮತಟ್ಟಾದ ಮೈದಾನ ಸಿಗಬೇಕು. ಹೆದರಿಸಿ, ಬೆದರಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವುದರಿಂದ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಲೋಕಸಭಾ ಚುನಾವಣೆ ಹೇಗೆ ನಡೆಯಬಹುದು ಎಂಬುದದನ್ನು ಚಂಡೀಗಢ ಮೇಯರ್ ಚುನಾವಣೆ ಸೂಚಿಸುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಚುನಾವಣೆ ಆಯೋಗದ ಕಚೇರಿಯಿಂದ ಚಂಡೀಗಢಕ್ಕೆ ಒಂದು ಗಂಟೆ ಪ್ರಯಾಣ. ಅಷ್ಟು ಅನತಿ ದೂರದಲ್ಲಿರುವ ನಗರದ ಮೇಯರ್ ಚುನಾವಣೆಯಲ್ಲಿ ಚುನಾವಣಾ ಕೆಲಸಕ್ಕೆ ಬಂದ ಅಧಿಕಾರಿಯೇ ಮತ ಚಲಾಯಿಸಿದ್ದಾನೆ ಎಂದರೆ, ಲೋಕಸಭಾ ಚುನಾವಣೆ ಗೆಲ್ಲಲು ಮೋದಿ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಏನೆಲ್ಲ ಮಾಡುತ್ತಿರಬಹುದು ಎಂಬದನ್ನು ಅಂದಾಜಿಸಲು ಈ ಉದಾಹರಣೆ ಸಾಕು” ಎಂದು ಹೇಳಿದ್ದಾರೆ.

“ಹದರಿಸಿ, ಬೆದರಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ನಮ್ಮ ಬಳಿ ಇದ್ದಾಗ ಭ್ರಷ್ಟರು ಎನ್ನುತ್ತಾರೆ. ಬಳಿಕ ಅವರನ್ನೇ ಪಕ್ಷಕ್ಕೆ ಎಳೆದುಕೊಂಡು ಪ್ರಮಾಣಿಕರು ಎನ್ನುತ್ತಾರೆ. ದೇಶದಲ್ಲಿ ನಿರಂಕುಶ ನಾಯಕತ್ವ ಮತ್ತು ಸರ್ವಾಧಿಕಾರ ಆಡಳಿತ ತರಲು ಮೋದಿ ಹವಣಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕೆಲವರು ಮೋದಿ ಇದ್ದರೆ ಮಾತ್ರ ದೇಶ ನಡೆಯುತ್ತದೆ ಎಂಬ ಗುಂಗಿನಲ್ಲಿದ್ದಾರೆ. ಹಲವಾರು ನಾಯಕರು ದೇಶ ಕಟ್ಟಿದ್ದಾರೆ. ಆದರೆ, ಮೋದಿಯವರನ್ನು ಜಾಹೀರಾತು ಸರ್ಕಾರ. ಅವರೇನು ಮಾಡುತ್ತಿಲ್ಲ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!