Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರಸಭೆಯಿಂದ ಅಂಗಡಿಗಳ ಮೇಲೆ ದಾಳಿ : 364 ಕೆ.ಜಿ ಪ್ಲಾಸ್ಟಿಕ್ ವಶ-23,820 ರೂ. ದಂಡ

ಪ್ಲಾಸ್ಟಿಕ್ ನಿಷೇಧವಿದ್ದರೂ, ಅಕ್ರಮವಾಗಿ ಪ್ಲಾಸ್ಟಿಕ್ ಕವರ್ ಮಾರುತ್ತಿದ್ದ ಅಂಗಡಿಗಳ ಮೇಲೆ ಸೋಮವಾರ ಸಂಜೆ ನಗರಸಭೆ ಸಿಬ್ಬಂದಿಗಳು ದಾಳಿ ನಡೆಸಿ 364 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ‌ವಶ ಪಡಿಸಿಕೊಂಡು, 23,820 ರೂ.ದಂಡ ವಿಧಿಸಿದ್ದಾರೆ.

ಮಂಡ್ಯ ನಗರಸಭೆ‌ ವತಿಯಿಂದ ನಗರದ ಪೇಟೆ ಬೀದಿಯಲ್ಲಿ‌ರುವ ಅಂಗಡಿಗಳು ಹಾಗೂ ಬೀದಿ ‌ಬದಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಮೇಲೆ‌ ನಗರಸಭೆ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸಿ,ಅಕ್ರಮವಾಗಿ ಮಾರುತ್ತಿದ್ದ ಪ್ಲಾಸ್ಟಿಕ್ ವಶಪಡಿಸಿಕೊಂಡರು.

nudikarnataka.com

ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ ಕೂಡ ಅಕ್ರಮವಾಗಿ ಪ್ಲಾಸ್ಟಿಕ್ ಕವರ್ ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ.ಈ ಗಾಗಲೇ ಹಲವು ಬಾರಿ ಪ್ಲಾಸ್ಟಿಕ್ ಕವರ್ ಮಾರದಂತೆ ಎಚ್ಚರಿಕೆ ನೀಡಲಾಗಿದ್ದರೂ,ವ್ಯಾಪಾರಿಗಳು ಅನುಸರಿಸದ ಕಾರಣ ದಾಳಿ ನಡೆಸಲಾಗಿದೆ.ಈ ಸಂದರ್ಭದಲ್ಲಿ
364 ಕೆ.ಜಿ ನಿಷೇಧಿತ ವಶಪಡಿಸಿಕೊಂಡು 28,320 ರೂ ದಂಡ ವಿಧಿಸಿದ್ದೇವೆ.ಮುಂದೆಯೂ ವ್ಯಾಪಾರಿಗಳು ಪ್ಲಾಸ್ಟಿಕ್ ಕವರ್ ಮಾರಿದರೆ ಇನ್ನೂ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು
ಮಂಡ್ಯ ನಗರಸಭೆ ಆಯುಕ್ತ ಮಂಜುನಾಥ್ ಅವರು ತಿಳಿಸಿದರು.

ದಾಳಿ‌ಯ ಸಂದರ್ಭದಲ್ಲಿ ನಗರಸಭೆ ಸಹಾಯಕ‌ ಕಾರ್ಯಪಾಲಕ ಅಭಿಯಂತರ ರವಿ ಕುಮಾರ್, ಆರೋಗ್ಯ ನಿರೀಕ್ಷಕ ಶಿವಶಂಕರ್, ಅಶ್ವಥ್, ಚಲುವರಾಜು, ಪ್ಲಾಸ್ಟಿಕ್ ವಿರೋಧಿ ಹೋರಾಟಗಾರ ಜಯಶಂಕರ್ ಹಾಗೂ ನಗರಸಭೆ‌ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!