Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ‘ಕೈ’ ಟಿಕೆಟ್ ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ ಸತೀಶ್ ಗೌಡ

ಮಂಡ್ಯ ವಿಧಾನ ಸಭಾ ಕ್ಷೇತ್ರದಿಂದ ಸಿದ್ದಾರೂಢ ಸತೀಶ್ ಗೌಡ ಬೆಂಗಳೂರಿನ ಕೆ. ಪಿ.ಸಿ.ಸಿ ಕಚೇರಿಯಲ್ಲಿ ಬೆಂಬಲಿಗರೊಂದಿಗೆ ಬಂದು ಅರ್ಜಿ ಸಲ್ಲಿಸಿದರು.

ಮುಂಬರುವ ಚುನಾವಣೆಯಲ್ಲಿ ಮಂಡ್ಯ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ದಾರೂಢ ಸತೀಶ್ ಗೌಡ ಬೆಂಗಳೂರಿನ ವಸಂತ ನಗರದಲ್ಲಿರುವ ಕೆ.ಪಿ.ಸಿ.ಸಿ ಕಚೇರಿಗೆ ಆಗಮಿಸಿ, ಪಕ್ಷ ನಿಗದಿ ಪಡಿಸಿರುವ 2 ಲಕ್ಷ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದರು

ಬಳಿಕ ಮಾತನಾಡಿದ ಸಿದ್ದಾರೂಢ ಅವರು, 18ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲೀದ್ದೇನೆ, ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಅವರ ಗಮನಕ್ಕೆ ತಂದು ಚುನಾವಣೆಗೆ ಅರ್ಜಿ ಹಾಕಿದ್ದೇನೆ, ಬೂತ್ ಮಟ್ಟದಿಂದ ಇಲ್ಲಿಯವರೆಗೆ ಕಾಂಗ್ರೆಸ್ ಗೆ ಕೆಲಸ ಮಾಡಿದ್ದೇನೆ, ಪಕ್ಷದ ವರಿಷ್ಠ ರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಪಕ್ಷದ ವರಿಷ್ಠರು ಅರ್ಜಿ ಹಾಕಿರುವವರ ಸಂಘಟನಾ ಸಾಮರ್ಥ್ಯವನ್ನು ಗುರುತಿಸಲಿದ್ದಾರೆ ಎಂದರು.

ಚುನಾವಣೆ ಬಂದಾಗ ಮಾತ್ರ ಕೆಲವರು ಚುನಾವಣೆ ಸ್ಪರ್ಧಿಸಲು ಮುಂದೆ ಬರುತ್ತಾರೆ, ಅವರನ್ನು ಪರಿಗಣಿಸಬಾರದು ಎಂದ ಅವರು, ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಜೋಡೋ ಯಾತ್ರೆ ಆದ ನಂತರ ಕಾಂಗ್ರೆಸ್ ಪರವಾಗಿ ರಾಜ್ಯದಲ್ಲಿ ಒಲವು ಇದೆ ಎಂದರು.

ಇದಕ್ಕೂ ಮೊದಲು ಸಿದ್ದರೂಢ ಅವರು ಆದಿಚುಂಚನಗಿರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಆಶೀರ್ವಾದ ಪಡೆದು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದರು.

ಇದೆ ವೇಳೆ ಕಾಂಗ್ರೆಸ್ ಮುಖಂಡರಾದ, ಯಶೋಧ, ವೀಣಾ, ಕಾಳೇಗೌಡ, ರಾಮು, ಸಂತೋಷ್, ಕಾರ್ತಿಕ್ ಪುನೀತ್ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!