ಚೆನ್ನೈ ಡಾ. ಎಂ.ಜಿ. ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಮೈಸೂರು ನಿಲ್ದಾಣಕ್ಕೆ ಬರುವ ವಂದೇ ಭಾರತ್ ರೈಲಿನ ವೇಗ ಗಂಟೆಗೆ 160 ಕಿಲೋಮೀಟರ್ ಎಂದು ಕೇಂದ್ರ ಸರ್ಕಾರ ಹೇಳುತ್ತದೆ.
ಆದರೆ ಇದೇ ವೇಗದಲ್ಲಿ ಚೆನ್ನೈಯಿಂದ ಬೆಂಗಳೂರಿಗೆ ಈ ರೈಲು ಬರಲು ಸಾಧ್ಯವಿಲ್ಲ. ಕಾರಣವೇನೆಂದರೆ ಚೆನ್ನಯಿಂದ ಮೈಸೂರಿನವರಿಗೂ ರೈಲು ಹಳಿಗಳ ಗೇಜಿನ ಸಾಮರ್ಥ್ಯ ಒಂದೇ ರೀತಿ ಇಲ್ಲ.
ಚನ್ನೈಯಿಂದ ಕಾಟಪಾಡಿ,ಜೋಲಾರ್ ಪೇಟೆವರೆಗೆ 160 ಕಿ.ಮೀ ವೇಗದಲ್ಲಿ ಬರಬಹುದು.ಏಕೆಂದರೆ ಅಲ್ಲಿವರೆಗೆ 110 ಕೆ ಎಚ್ ಪಿ ಸಾಮರ್ಥ್ಯದ ಹಳಿಗಳಿರುವ ಕಾರಣ ಅಲ್ಲಿ ಈ ವೇಗದಲ್ಲಿ ಸಂಚರಿಸುತ್ತದೆ.
ಆದರೆ ಜೋಲಾರ್ ಪೇಟೆಯಿಂದ, ಬೆಂಗಳೂರು,ಅಲ್ಲಿಂದ ಮೈಸೂರಿನವರಿಗೆ 75 ಕೆ ಹೆಚ್ ಪಿ ಸಾಮರ್ಥ್ಯದ ರೈಲು ಹಳಿಗಳಿರುವ ಕಾರಣ ಇಲ್ಲಿ ಗಂಟೆಗೆ 90 ರಿಂದ 100 ಕಿಲೋಮೀಟರ್ ವೇಗದಲ್ಲಿ ಮಾತ್ರ ವಂದೇ ಭಾರತ್ ರೈಲು ಸಂಚರಿಸಲು ಸಾಧ್ಯ.
ಶತಾಬ್ದಿ ಎಕ್ಸ್ಪ್ರೆಸ್ ಕೂಡ ಬೆಂಗಳೂರಿನಿಂದ ಮೈಸೂರಿಗೆ 90 ರಿಂದ 100 ಕಿ.ಮೀ ವೇಗದಲ್ಲಿ ಸಾಗುತ್ತದೆ. ವಂದೇ ಭಾರತ್ ರೈಲು,ಶತಾಬ್ದಿ ಎಕ್ಸ್ಪ್ರೆಸ್ ರೈಲು ಒಂದೇ ವೇಗದಲ್ಲಿಯೇ ಚಲಿಸುತ್ತವೆ ಎಂಬುದು ಮೂಲಗಳಿಂದ ತಿಳಿದು ಬಂದ ಮಾಹಿತಿ.
ಇನ್ನು ಎರಡೂ ರೈಲುಗಳು ಬೆಂಗಳೂರಿನಿಂದ ಮೈಸೂರು ತಲುಪಲು ಎರಡು ಗಂಟೆ ಸಮಯ ಬೇಕೇ ಬೇಕು.