ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರನ್ನಾಗಿ ನಾಗಮಂಗಲ ತಾಲ್ಲೂಕಿನ ಬಿ.ಬೆಟ್ಟಹಳ್ಳಿ ಗ್ರಾಮದ ಮಂಜುನಾಥ್ ಗೌಡ ಎಸ್.ಆರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿಯಾಗಿದ್ದ ಮಂಜುನಾಥ್ ಗೌಡ ಎಸ್.ಆರ್ ಅವರನ್ನು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರ ಹುದ್ದೆಗೆ ನೇಮಕ ಮಾಡಿ ಸಮಾಜದ ಅಧಿಕಾರಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸಚಿವರಿಗೆ ಅಭಿನಂದನೆ
ಈ ನೇಮಕಕ್ಕೆ ಕಾರಣಕರ್ತರಾದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಮಂಜುನಾಥ್ ಗೌಡ ಹಾಗೂ ಅವರ ಹಿತೈಷಿಗಳು ಭೇಟಿ ಮಾಡಿ, ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.