Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜ.16ಕ್ಕೆ ಮಾತಂಗ ಮಹರ್ಷಿ ಜಯಂತಿ: ಸಾಧಕರಿಗೆ ಸನ್ಮಾನ

ಸಪ್ತಸ್ವರಗಳ ಸೃಷ್ಟಿಕರ್ತ ಮಾತಂಗ ಮಹರ್ಷಿರವರ ಜಯಂತಿ ಹಾಗೂ ಮಂಡ್ಯ ಜಿಲ್ಲಾ ಮಟ್ಟದ ಸಾಧಕರಿಗೆ ಸನ್ಮಾನ ಸಮಾರಂಭವು ಮಂಡ್ಯನಗರದ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಭವನದಲ್ಲಿ ಜ.16ರಂದು ಬೆಳಗ್ಗೆ 10-30 ಗಂಟೆಗೆ ನಡೆಯಲಿದೆ.

ವಿಜಯನಗರ ಜಿಲ್ಲೆಯ ಹಂಪಿ ಮಾತಂಗ ಮಹರ್ಷಿ ಸೇವಾ ಆಶ್ರಮ ಶ್ರೀಪೂರ್ಣಾನಂದ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ದಿವ್ಯಸಾನಿಧ್ಯ ವಹಿಸುವರು. ಅ.ಕ.ಬಾಬುಜಗಜೀವನರಾಮ್ ಸಂಘಗಳ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಆರ್. ಚಂದ್ರಶೇಖರ್‌ ಅಧ್ಯಕ್ಷತೆ ವಹಿಸುವರು. ವಾಗೀಶ್ ಟೈಮ್ಸ್ ವಾಹಿನಿಯ ವಾಗೀಶ್ ಚಂದ್ರಗುರು ಪ್ರಧಾನ ಭಾಷಣ ಮಾಡಿವರು.

ಮುಖ್ಯ ಅತಿಥಿಗಳಾಗಿ ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರ ಕಾರ್ಯಾಲಯದ ವಿಶೇಷ ಕರ್ತವ್ಯಾಧಿಕಾರಿಎಂ. ವೆಂಕಟೇಶ್, ಬಿ.ಜಿ.ಪುರ ಗ್ರಾ.ಪಂ. ಅಧ್ಯಕ್ಷ ಬಿ.ಆರ್. ಸಿದ್ದರಾಜು, ಬ್ರಹ್ಮದೇವರಹಳ್ಳಿ ಗ್ರಾ.ಪಂ. ಅಧ್ಯಕ್ಷ ಬಿ.ಸಿ. ವೆಂಕಟೇಶ್, ಬಗ‌ರ್ ಹುಕುಂ ಸಾಗುವಳಿ ಸಮಿತಿ ಸದಸ್ಯರ ಜಿ. ಕುಮಾರ್ ಬಾಳೆಹೊನ್ನಿಗ, ನಾಗೇಗೌಡನದೊಡ್ಡಿ ಗ್ರಾ.ಪಂ. ಚಲುವಮ್ಮ ಚಿಕ್ಕನಿಂಗಯ್ಯ ಭಾಗವಹಿಸುವರು. ಮುಖಂಡರಾದ ಬಿ.ಬಿ.ಕಾವಲ್ ಕಾಂತರಾಜು, ಹೆಚ್.ಎಂ.ಪುಟ್ಟರಾಜು ಕೆ.ಆರ್.ಪೇಟೆ ಹಾಗೂ ವಕೀಲ ಕೆಂಪಯ್ಯ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಎನ್. ಶೇಖರ್ ಹನಿಯಂಬಾಡಿ. ಚಾಮನಹಳ್ಳಿ ಮಂಜು, ಹನಿಯಂಬಾಡಿ ಜಗದೀಶ್, ನಿಂಗರಾಜು ಹೆಚ್.ಸಿ ಹೊನ್ನಾಯಕನಹಳ್ಳಿ ಹಾಗೂ ವಿ. ನಂಜುಂಡ, ಹೊಸಹೊಳಲು ಅವರನ್ನು ಸನ್ಮಾನಿಸಲಾಗುವುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!