Friday, September 20, 2024

ಪ್ರಾಯೋಗಿಕ ಆವೃತ್ತಿ

ಈ ಚುನಾವಣೆ ಮೋದಿಯ ಕೈ ತಪ್ಪಿ ಹೋಗಿದೆ; ರಾಹುಲ್ ಗಾಂಧಿ ಹೇಳಿದ್ದೇನು ?

ಕಾಂಗ್ರೆಸ್‌ನ ಗ್ಯಾರಂಟಿ ಮತ್ತು ಮೋದಿ ಕಿ ಗ್ಯಾರಂಟಿಯ ನಡುವೆ ಅಗಾಧ ವ್ಯತ್ಯಾಸವಿದೆ ಎಂದು ಹೇಳಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು “ಲೋಕಸಭೆ ಚುನಾವಣೆ ಈಗಾಗಲೇ ತನ್ನ ಕೈ ತಪ್ಪಿದೆ ಎಂಬುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ತಿಳಿದಿದೆ” ಎಂದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಕಾಂಗ್ರೆಸ್‌ನ ಗ್ಯಾರಂಟಿ ಹಿಂದೂಸ್ತಾನದ ಜನರಿಗಾಗಿ ಇರುವ ಸರ್ಕಾರವಾಗಿದೆ. ಆದರೆ ಮೋದಿ ಅವರ ಗ್ಯಾರಂಟಿ ಅದಾನಿಯವರ ಸರ್ಕಾರವಾಗಿದೆ” ಎಂದಿದ್ದಾರೆ.

ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ವಿವರಿಸಿರುವ ರಾಹುಲ್ ಗಾಂಧಿ ಅವರು, “ಮಹಿಳೆಯರಿಗೆ ಮಾಸಿಕವಾಗಿ 8,500 ರೂಪಾಯಿ ನೀಡುವುದು, ಯುವಕರಿಗೆ ವಾರ್ಷಿಕ ಒಂದು ವರ್ಷ ವೇತನ ಲಭಿಸುವ ಉದ್ಯೋಗ ನೀಡುವುದು, 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದು, ರೈತರಿಗೆ ಎಂಎಸ್‌ಪಿಗಾಗಿ ಕಾನೂನು ಮಾಡುವುದು ಕಾಂಗ್ರೆಸ್‌ನ ಗ್ಯಾರಂಟಿ” ಎಂದು ತಿಳಿಸಿದ್ದಾರೆ.

ಆದರೆ ಮೋದಿ ಅವರ ಗ್ಯಾರಂಟಿ ಅದಾನಿ ಪರವಾದುದ್ದು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. “ಕೋಟ್ಯಾಧಿಪತಿಗಳ ಜೇಬಿನಲ್ಲಿ ದೇಶದ ಸಂಪತ್ತು, ಚಂದಾ ದಂಧೆ ನಡೆಸುವ ವಸೂಲಿ ಗ್ಯಾಂಗ್, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕೊನೆ ಮಾಡುವುದು, ಪ್ರತಿ ಪೈಸೆಯನ್ನು ರೈತರು ಲೆಕ್ಕ ಹಾಕುವಂತಹ ಪರಿಸ್ಥಿತಿ ಸೃಷ್ಟಿ ಮಾಡುವುದು ಬಿಜೆಪಿಯ ಗ್ಯಾರಂಟಿ” ಎಂದು ಹೇಳಿದರು.

“>

“ಇಲ್ಲಿ ವ್ಯತ್ಯಾಸ ಸ್ಪಷ್ಟವಾಗಿದೆ! ಕಾಂಗ್ರೆಸ್ ಭಾರತದಲ್ಲಿ ಕೋಟ್ಯಂತರ ಮಿಲಿಯನೇರ್‌ಗಳನ್ನು ಸೃಷ್ಟಿಸುತ್ತದೆ ಮತ್ತು ಚುನಾವಣೆ ತನ್ನ ಕೈ ತಪ್ಪಿ ಹೋಗಿದೆ ಎಂದು ಮೋದಿಗೆ ತಿಳಿದಿದೆ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!