ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನ ಪ್ರಯಕ್ತ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಸೇವಾ ಸಪ್ತಾಹ ಆಚರಿಸರಿಸಿದರು.
ಮಂಡ್ಯನಗರದ ಸರ್ಕಾರಿ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಪೌರ ಕಾರ್ಮಿಕರಿಗೆ ಅಭಿನಂದನೆ ಕಾರ್ಯಕ್ಕೆ ಚಾಲನೆ ನೀಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಸದಾನಂದ ಮಾತನಾಡಿದರು.
ಜನಪರ ಆಡಳಿತ ಮತ್ತು ಭಾರತ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಆರ್ಥಿಕಾಭಿವೃದ್ಧಿ, ಉದ್ಯೋಗ ಸೃಷ್ಠಿ, ರೈತರ ಹಿತ ಕಾಯುವ ಯೋಜನೆಗಳನ್ನು ಜಾರಿ ಮಾಡಿದ್ದಾರೆ, ಆರ್ಥಿಕ ಪ್ರಗತಿಗಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಮೋದಿಯವರು ಮೆಚ್ಚುಗೆಗೆ ಪಾತ್ರವಾಗಿದ್ದೆದಾರೆ ಎಂದರು.
ಮಂಡ್ಯ ಗ್ರಾಮಾಂತರ ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಶಿವಕುಮಾರ ಆರಾಧ್ಯ ನೇತೃತ್ವದಲ್ಲಿ ಶೌಚಾಲಯ ಸ್ವಚ್ಛತಾ ಅಭಿಯಾನ ನಡೆಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಶಿವಣ್ಣ ಚಂದಗಾಲು, ನಗರಾಧ್ಯಕ್ಷ ವಿವೇಕ್, ಮೂಡ ಸದಸ್ಯ ಹನುಮಂತ, ನಗರಸಭಾ ಸದಸ್ಯರಾದ ಚಂದ್ರ ,ಪ್ರಸನ್ನ, ಶಿವಲಿಂಗು, ಸಾಗರ್, ಯೋಗೇಶ್, ಅಶೋಕ್, ತಮ್ಮಣ್ಣಶೆಟ್ಟಿ, ನಾಗಾನಂದ ಸೇರಿದಂತೆ ಹಲವರು ಇದ್ದರು.