Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೋದಿಯವರ ರೋಡ್ ಷೋಗೆ ಜನ ಬರಲು ಅವಕಾಶ ನೀಡಿ: ಸಿ.ಪಿ‌.ಉಮೇಶ್ ಮನವಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೋಡ್ ಷೋಗೆ ಜನರು ಬರಲು ಅವಕಾಶ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ‌.ಪಿ‌.ಉಮೇಶ್ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಎಸ್ಪಿ ಎನ್.ಯತೀಶ್ ಅವರಿಗೆ ಮನವಿ ಮಾಡಿದರು.

ಮಂಡ್ಯ ನಗರಕ್ಕೆ ಬರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಜನರು ಪ್ರಧಾನ ಮಂತ್ರಿ ಮೋದಿಯವರ ರೋಡ್ ಷೋ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ ವೃತ್ತಕ್ಕೆ ಬಂದ ಅಲೋಕ್ ಕುಮಾರ್ ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮನವಿ ಮಾಡಿಕೊಂಡರು.

ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬಂದ್ ಮಾಡದಂತೆ ಮನವಿ ಮಾಡಿದರು.ರೋಡ್ ಶೋಗೆ ನಿರೀಕ್ಷಿತ ಜನರು ಬರದಿರೋದಕ್ಕೆ ಬಂದೋಬಸ್ತ್ ಕಾರಣ. ಬಂದೋಬಸ್ತ್ ಸಡಿಲಗೊಳಿಸಿ ಜನರನ್ನು ಬಿಡುವಂತೆ ಒತ್ತಾಯ ಮಾಡಿದರು.

ಇದಕ್ಕೆ ಎಡಿಜಿಪಿ ಅಲೋಕ್ ಕುಮಾರ್,ಜನರನ್ನು ತಪಾಸಣೆ ಮಾಡದೆ ಬಿಡಲು ಸಾಧ್ಯವಿಲ್ಲ, ಬಂದೋಬಸ್ತ್ ಮಾಡಲೇಬೇಕು.ವಾಹನಗಳನ್ನು ಮಾತ್ರ ಬಿಡಲು ಸಾಧ್ಯವಿಲ್ಲ. ರೋಡ್ ಷೋಗೆ ನಡೆದುಕೊಂಡು ಬರುವ ನಾಗರೀಕರನ್ನು ತಪಾಸಣೆ ಮಾಡಿ ಬಿಡುವುದಾಗಿ ಹೇಳುದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!