ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆ ಉದ್ಘಾಟನೆಯ ಅಂಗವಾಗಿ ಜಿಲ್ಲೆಯಲ್ಲಿ ಪ್ರವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಿಸುವ ರಥಗಳಿಗೆ ಅ.29 ರಂದು ಬೆ.11.30 ಕ್ಕೆ ಮಂಡ್ಯ ನಗರದ ಕಾಳಿಕಾಂಭ ದೇವಸ್ಥಾನದಲ್ಲಿ ಚಾಲನೆ ಸಿಗಲಿದೆ.
ಶ್ರೀ ಕಾಳಿಕಾಂಭ ದೇವಾಲಯ ಮಾರ್ಗವಾಗಿ ನಂದಾ ವೃತ್ತ, ಆನೆಕೆರೆ ಬೀದಿ,ಲಕ್ಷ್ಮೀ ಜನಾರ್ಧನಸ್ವಾಮಿ ದೇವಾಲಯ ,ಹೊಳಲು ವೃತ್ತ, ರೈತಸಭಾಂಗಣ, (ಸಂಜಯ ಸರ್ಕಲ್) ಬಿ.ಜಿ.ಎಸ್.ಸಮುದಾಯ ಭವನ, ಸ್ವರ್ಣಸಂದ್ರ, ಗುತ್ತಲು,ಅರ್ಕೇಶ್ವರ ದೇವಾಲಯ, ತಾವರೆಗೆರೆ, ಬಿಸಿಲು ಮಾರಮ್ಮ ದೇವಾಲಯ, ಹೊಸಹಳ್ಳಿ ಸರ್ಕಲ್, ವಿ.ವಿ.ರಸ್ತೆ, ನಗರಸಭೆ, ಮಹಾವೀರ ಸರ್ಕಲ್,ಫ್ಯಾಕ್ಟರಿ ಸರ್ಕಲ್, ಉಮ್ಮಡಹಳ್ಳಿ,ಕೀಲಾರ , ಹೊಡಾಘಟ್ಟ, ಆಲಕರೆ, ಬೂದನೂರು ಮಾರ್ಗವಾಗಿ ಸಂಚರಿಸಿ ಮಂಡ್ಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದೆ.
ಎರಡನೇ ರಥವು ಮಂಡ್ಯದ ಶ್ರೀಕಾಳಿಕಾಂಭ ದೇವಾಲಯದಿಂದ ಸಾತನೂರು,ಹಲಿವಾನ,ಕೆರಗೋಡು, ಮಾರಗೌಡನಹಳ್ಳಿ, ಚಂದಗಾಲು (ಬ),ಹಲ್ಲೇಗೆರೆ, ಬಿದರಕೋಟೆ, ಆಬಲವಾಡಿ-ಕೊಪ್ಪ-ತಗ್ಗಹಳ್ಳಿ-ಬೆಕ್ಕಳಲೆ ಮಾರ್ಗವಾಗಿ ಸಂಚರಿಸಿ ಕೌಡ್ಲೆಯಲ್ಲಿ ವಾಸ್ತವ್ಯ ಹೂಡಲಿದೆ.