Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಲೆಮಾರಿ ವಸತಿ ಯೋಜನೆಯ ₹300 ಕೋಟಿ ರೂ.ಗಳನ್ನು ವಾಪಸ್ ಪಡೆದ ಸರ್ಕಾರ : ಕಾಂಗ್ರೆಸ್ ಕಿಡಿ

ಬಿಜೆಪಿ ದಲಿತ ವಿರೋಧಿ ಎಂಬುದನ್ನು ಪದೇ ಪದೇ ನಿರ್ಲಜ್ಜವಾಗಿ ಸಾಬೀತು ಮಾಡುತ್ತಿದೆ. ಹಿಂದೆ SCP, TSP ಅನುದಾನವನ್ನು ಬೇರೆಡೆ ವರ್ಗಾಯಿಸಲಾಗಿತ್ತು. ಈಗ ಅಲೆಮಾರಿ ಸಮುದಾಯಗಳ ವಸತಿ ಯೋಜನೆಯ ₹300 ಕೋಟಿಯನ್ನು ಬೇರೆಡೆ ವರ್ಗಾಯಿಸಲಾಗಿದೆ. ಅತಿ ಸೂಕ್ಷ್ಮ ಹಾಗೂ ದುರ್ಬಲ ಸಮುದಾಯಗಳ ವಸತಿ ಕನಸಿಗೆ ಬಿಜೆಪಿ ಸರ್ಕಾರ ಕೊಳ್ಳಿ ಇಟ್ಟಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

“>

ಬಿಜೆಪಿ ಆಡಳಿತದಲ್ಲಿ ಯಾರೂ ಏನನ್ನೂ ಪ್ರಶ್ನಿಸಬಾರದೇ? ಬಳ್ಳಾರಿಯಲ್ಲಿ ಕಳಪೆ ಆಹಾರದ ವಿರುದ್ಧ ದನಿ ಎತ್ತಿದ 25 ಪರಿಶಿಷ್ಠ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿದ್ದು ಖಂಡನೀಯ. ಸಿಎಂ ಬೊಮ್ಮಾಯಿ ಅವರೇ, ವಿದ್ಯಾರ್ಥಿ ಪರ ಕಾಳಜಿ ಇದ್ದಿದ್ದೇ ಆದರೆ ಜಿಲ್ಲಾಧಿಕಾರಿ ಹಾಗೂ ವಾರ್ಡನ್ ವಿರುದ್ಧ ಕ್ರಮ ಜರುಗಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!