ಕಾವೇರಿ ನೀರಾವರಿ ನಿಗಮದಲ್ಲಿ ಕೆಲಸ ಮಾಡುವ ನೀರುಗಂಟಿ, ಗಿಡ ಕೀಳುವ ಕೆಲಸ ಮಾಡುವವರು, ನಾಲೆ ಬದಿ ಗಿಡಗಂಟಿಗಳನ್ನು ತೆರವು ಮಾಡುವವರು, ತೋಟಗಾರಿಕೆ ಹಾಗೂ ಅಣೆಕಟ್ಟೆಯ ಸುತ್ತಮುತ್ತ ಕೆಲಸ ಮಾಡುವ ವರಿಗೆ ನೀರಾವರಿ ಇಲಾಖೆಯು ವೇತನ ನೀಡದೇ ವಂಚಿಸುತ್ತಿದೆ ಎಂದು ಆರೋಪಿಸಿ ಮೈಸೂರು ಡಿವಿಜನ್ ಇಂಡಸ್ಟ್ರಿಯಲ್ ವರ್ಕರ್ರ್ಸ್ ಜನರಲ್ ಯೂನಿಯನ್ನಿಂದ ಮಂಡ್ಯನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾರ್ಮಿಕರಿಗೆ ನೀಡಬೇಕಾದ ಇಎಸ್ಐ, ಪಿಎಫ್ಗಳನ್ನು ಆಯಾ ಇಲಾಖೆಗೆ ಪಾವತಿಸದೇ ವಂಚಿಸಲಾಗುತ್ತಿದೆ. ನೌಕರರು ಹಾಗೂ ಅವರ ಕುಟುಂಬ ವರ್ಗಕ್ಕೆ ಸಿಗಬೇಕಾದ ವೈದ್ಯಕೀಯ ಸೌಲಭ್ಯವನ್ನೂ ನೀಡುತ್ತಿಲ್ಲ. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡುವ ನೌಕರರ ಬಗ್ಗೆ ನಿರ್ಲಕ್ಷೃ ವಹಿಸಲಾಗುತ್ತಿದೆ. ವಾರ್ಷಿಕ ರಜೆ, ಬೋನಸ್ ಕೂಡ ನೀಡುತ್ತಿಲ್ಲ. ಆದ್ದರಿಂದ ಈ ಬಗ್ಗೆ ಕ್ರಮ ವಹಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎನ್.ಕೆ.ದೇವದಾಸ್, ಎಚ್.ಬಿ.ರಾಮಕೃಷ್ಣ, ಸೋಮರಾಜೇ ಅರಸು, ಕೃಷ್ಣ, ಕುಮಾರ, ಜಲೇಂದ್ರ ಇತರರಿದ್ದರು.