12 ನೇ ಶತಮಾನದ ಶರಣ ಶ್ರೇಷ್ಠ ಕಾಯಕಯೋಗಿ ಕುಳುವ ನುಲಿಯ ಚಂದಯ್ಯ ಚಂದಯ್ಯನವರ 916ನೇ ಜಯಂತಿ ಆಚರಣೆ ಕಾರ್ಯಕ್ರಮವು ಸೆ.16ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರವಿಕುಮಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದೆ ಸುಮಲತಾ, ಶಾಸಕರಾದ ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ ಹೆಚ್.ಟಿ.ಮಂಜು, ಕೆ.ಎಂ.ಉದಯ್, ಡಾ.ಪಿ.ಸಿ.ಜಾಫರ್ ಭಾಗವಹಿಸಿವರು. ವಿಶೇಷ ಆಹ್ವಾನಿತರಾಗಿ ಜಿ.ಚಂದ್ರಣ್ಣ ಭಾಗವಹಿಸುವರು. ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಉಪನ್ಯಾಸ ನೀಡುವರು ಎಂದರು.
ಜಿಲ್ಲೆಯ ನಾಗರಿಕರು ಹಾಗೂ ಕುಳುವ ಸಮಾಜದ ಬಂಧುಗಳು ಮತ್ತು ನುಲಿಯ ಚಂದಯ್ಯನವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮುಖಂಡರಾದ ವೆಂಕಟೇಶ್ ಗಣಂಗೂರು, ಟೆಂಪೂ ರಾಮಕೃಷ್ಣ, ಕೆ.ವಿ.ನಾಗರಾಜು, ಕೃಷ್ಣ ಕುಮಾರ್ ಗಣಂಗೂರು ಉಪಸ್ಥಿತರಿದ್ದರು.