Friday, September 20, 2024

ಪ್ರಾಯೋಗಿಕ ಆವೃತ್ತಿ

ನ್ಯಾ. ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು : ಆದಿಜಾಂಬವ ವೇದಿಕೆ ಸ್ವಾಗತ

ಮಾದಿಗ ಸಮುದಾಯದ ಹಲವು ದಶಕಗಳ ಸುದೀರ್ಘ ಹೋರಾಟದ ಬೇಡಿಕೆಯಾದ ನ್ಯಾ.ಎ ಜೆ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದನ್ನು ಸ್ವಾಗತಿಸಿ ಮಳವಳ್ಳಿ ತಾಲ್ಲೂಕಿನ ಆದಿಜಾಂಬವ ವಿಚಾರ ವೇದಿಕೆ ನೇತೃತ್ವದಲ್ಲಿ ಹಲವು ಮುಖಂಡರು ಮಳವಳ್ಳಿ ಪಟ್ಟಣದ ಅನಂತರಾಮ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರ ಮೈಸೂರು ಪ್ರಸನ್ನಚಕ್ರವರ್ತಿ ಅವರನ್ನು ಸನ್ಮಾನಿಸಲಾಯಿತು. ಆದಿಜಾಂಬವ ವಿಚಾರ ವೇದಿಕೆ ಅಧ್ಯಕ್ಷ ನಡಕಲಪುರ ಮಂಜುನಾಥ್, ಉಪಾಧ್ಯಕ್ಷ ಟೌನ್ ಪ್ರಮೋದ್, ಪ್ರ‌ಧಾನ  ಕಾರ್ಯದರ್ಶಿ ಹೂವಿನಕೊಪ್ಪಲು ಪ್ರಶಾಂತ್, ಮುಖಂಡರಾದ ವೆಂಕಟೇಶ್( ವೆಂಕಿ) , ಶ್ರೀಧರ್, ಅರುಣ್, ಶಿವಾನಂದ್, ರವಿ, ಶಾಂತಕುಮಾರ್, ಶಿವಪ್ಪ, ಚಂದ್ರು, ಸತೀಶ್, ದರ್ಶನ್, ಕೃಷ್ಣಮೂರ್ತಿ, ದರ್ಶನ್, ಸರಸ್ವತಿ, ನಾಗಣ್ಣ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!