5 ವರ್ಷದ ಬಾಲ ಕಲಾವಿದೆ ಸೃಜನ ಎಸ್.ವಿ ಅವರಿಂದ 3 ದಿನಗಳ 3 ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಡಿ.18ರಿಂದ 21ರವರೆಗೆ ಮಂಡ್ಯನಗರ ಕಲ್ಲಹಳ್ಳಿಯ ಎಂ.ಎಲ್.ಸೋಮುವರದ ಅವರ ನಿವಾಸ ಪುಟ್ಟಹೆಜ್ಜೆಯಲ್ಲಿ ನಡೆಯಲಿದೆ.
ಕಿಡ್ಡಿ ಪ್ರೀ ಸ್ಕೂಲ್ ನ ಹಿರಿಯ ಶಿಕ್ಷಕಿ ಅಶ್ವಿನಿ ಕೆ.ಎಸ್. ಕಾರ್ಯಕ್ರಮ ಉದ್ಘಾಟಿಸುವರು. ಕವಿ, ಚಿಂತಕ ಸಾ.ವೆ.ರ.ಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಯಾಗಿ ಶೈಕ್ಷಣಿಕ ಸಲಹೆಗಾರ ಯೋಗೇಶ್ ಎಂ.ಭಾಗವಹಿಸುವರು. ಸೃಜನ ಎಸ್.ವಿ ಅವರ ಚಿತ್ರಕಲೆ ಕುರಿತು ಚಿತ್ರಕಲಾ ಉಪನ್ಯಾಸಕ ಪರಮೇಶ್ವರ್ ಮಾತನಾಡುವರು. ಚಿತ್ರಕಲೆಯ ಈಗಿನ ಸವಾಲುಗಳು ಕುರಿತು ಚಿತ್ರಕಲಾವಿದ ಜಯದೇವ್ ಮಾತನಾಡುವರು.