ಮಂಡ್ಯದ ಕೃಷಿಕ ಲಯನ್ಸ್ ಸಂಸ್ಥೆ ಹಾಗೂ ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ಇವರ ವತಿಯಿಂದ ಮಂಡ್ಯ ನಗರದ ಬನ್ನೂರು ರಸ್ತೆ ಧನ್ವಂತರಿ ಮೆಡಿಕಲ್ ಹತ್ತಿರ ಜ.20ರಂದು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕೀಲು ಮತ್ತು ಮೂಳೆರೋಗ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಕೀಳು ಮತ್ತು ಮೂಳೆರೋಗ ತಜ್ಞ ಡಾ.ಎಲ್.ಕೆ. ಸುನೀಲ್ ಭಾಗವಹಿಸುವರು. ಜಾಯಿಂಟ್ ರಿಪ್ಲೇಸ್ ಮೆಂಟ್ ಸರ್ಜರಿ, ಕ್ರೀಡಾ ಸಂಬಂಧಿತ ಗಾಯಗಳು, ಮೂಳೆ ಆಘಾತ, ಅರ್ಥೋಸ್ಕೋಪಿ ಸರ್ಜರಿ, ಮೊಣಕಾಲು, ಭುಜ, ಲೆಗ್ಮೆಂಟ್ ಸರ್ಜರಿ ಭುಜದ ನೋವು, ರೋಟೇಟರ್ ಕಫ್ ಇಂಜುರೀಸ್, ಮೂಳೆ ಮರುಜೋಡಣೆ, ಕೀಲು ಬದಲಾವಣೆ ಚಿಕಿತ್ಸೆ, ಬೆನ್ನು ಮೂಳೆ ಚಿಕಿತ್ಸೆ ಮುಂತಾದ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಲಯನ್ ಕೆ.ಟಿ.ಹನುಮಂತು ಮೊ.9380759918, 9448101081 ಇವರನ್ನು ಸಂಪರ್ಕಿಸಬಹುದು.