ಮೊದಲ ದಿನ ದೇಶದಲ್ಲಿ 57 ಕೋಟಿ ಗಳಿಸಿದ ಸಿನಿಮಾ ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ತೆರೆಕಂಡ ಎರಡನೇ ದಿನಕ್ಕೆ ಚಿತ್ರ 100 ಕೋಟಿಗೂ ಅಧಿಕ ಮೊತ್ತವನ್ನು ಕಲೆ ಹಾಕುವ ಮೂಲಕ ಟೀಕಾಕಾರಿಗೆ ತಕ್ಕ ಉತ್ತರ ನೀಡಿದೆ.
Day 2: 26 January. #RepublicDay holiday… Await Day 2 biz of #Pathaan… ₹ 100 cr+ in *2 days* [25 and 26 Jan] is DEFINITELY on the cards… Picture abhi baaki hain. pic.twitter.com/GBqPiV6iBl
— taran adarsh (@taran_adarsh) January 26, 2023
“>
ಮೊದಲ ದಿನ ದೇಶಾದ್ಯಂತ 57 ಕೋಟಿ ರೂಪಾಯಿಗಳನ್ನು ಕಲೆ ಹಾಕಿದ್ದ ಪಠಾಣ್ ಗುರುವಾರ ಮಧ್ಯಾಹ್ನದ ಹೊತ್ತಿಗೆ ಜಗತ್ತಿನಾದ್ಯಂತ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದೆ ಎಂದು ಬಾಲಿವುಡ್ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರದ ಹಿಂದಿ ಅವತರಣಿಕೆ ಮೊದಲ ದಿನ ದೇಶಾದ್ಯಂತ 55 ಕೋಟಿ ರೂಪಾಯಿಗಳನ್ನು ಕಲೆ ಹಾಕುವ ಮೂಲಕ ಕೆಜಿಎಫ್-2 ಚಿತ್ರದ ಮೊದಲ ದಿನದ (53 ಕೋಟಿ 95 ಲಕ್ಷ) ಗಳಿಕೆಯ ದಾಖಲೆಯನ್ನು ಹಿಂದಿಕ್ಕಿದ್ದು, ಬಿಡುಗಡೆಯಾದ ದಿನವೇ ಈವರೆಗೆ ಅತಿಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಸಿನಿಮಾ ಎಂಬ ಹೊಸ ದಾಖಲೆ ನಿರ್ಮಿಸಿದೆ. ಈ ಮೂಲಕ ಚಿತ್ರವನ್ನು ಸೋಲಿಸಲು ವಿರುದ್ಧ ಹಿಂದೂಪರ ಸಂಘಟನೆಗಳು ನಡೆಸಿದ ಪಿತೂರಿ ವಿಫಲವಾಗಿದೆ ಎಂಬುದು ಸಾಬೀತಾಗಿದೆ.
Hey #BoycotBigots Shhhhhhhhh … #HallaBol King Khan @iamsrk is back.. keep rocking @deepikapadukone #JohnAbraham and team #Pathan ..#BesharamRang 👍👍👍👍👍
— Prakash Raj (@prakashraaj) January 25, 2023
“>
ಚಿತ್ರಮಂದಿರದ ಪರದೆಯ ಎದುರು ಕುಣಿದು ಕುಪ್ಪಳಿಸುತ್ತ ಪಠಾಣ್ ಸಿನಿಮಾವನ್ನು ಪ್ರೇಕ್ಷಕರು ಸಂಭ್ರಮಿಸುತ್ತಿರುವ ವಿಡಿಯೋ ತುಣುಕೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಾಮಾಜಿಕ ಕಾರ್ಯಕರ್ತೆ ಫಾತಿಮಾ ಖಾನ್, “ಈ ರೀತಿಯ ಅಭಿಮಾನವನ್ನು ನಾನು ಎಲ್ಲಿಯೂ ಕಂಡಿಲ್ಲ. ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಲು ನಡೆಸಿದ ಪಿತೂರಿಗಳು ಫಲಿಸಿಲ್ಲ. ಶಾರುಖ್ ಖಾನ್ ಅವರ ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶಾರುಖ್ ಮನಸ್ಸುಗಳನ್ನು ಆಳುವ ವ್ಯಕ್ತಿ” ಎಂದು ಪಠಾಣ್ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
“ಬಾಯ್ಕಾಟ್ ಅಭಿಯಾನ ನಡೆಸುವವರೇ ಸದ್ದು ಮಾಡದಿರಿ. ಶಾರುಖ್ ಖಾನ್ ಮರಳಿ ಬಂದಿದ್ದಾರೆ” ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿರುವ ಬಹುಭಾಷಾ ನಟ ಪ್ರಕಾಶ್ ರೈ, ಶಾರುಖ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಪಠಾಣ್ ಸಿನಿಮಾ ಭರ್ಜರಿ ಗೆಲುವು ಸಾಧಿಸುತ್ತಲೇ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಬಾಲಿವುಡ್ ನಟಿ ರಿಚಾ ಚಡ್ಡಾ, “ದ್ವೇಷ ಎಂದಿಗೂ ಸೋಲುತ್ತದೆ” ಎಂದಿದ್ದಾರೆ.
ಈ ಹಿಂದೆ ಪಠಾಣ್ ವಿರುದ್ಧದ ಅಪಪ್ರಚಾರವನ್ನು ಪರೋಕ್ಷವಾಗಿ ಖಂಡಿಸಿದ್ದ ಶಾರುಖ್ ಖಾನ್, “ಜಗತ್ತು ಏನಾದರೂ ಮಾಡಿಕೊಳ್ಳಲಿ ನಾವು ನೀವೆಲ್ಲರು ಧನಾತ್ಮಕತೆಯೊಂದಿಗೆ ಬದುಕೋಣ” ಎಂದಿದ್ದರು. ಪತ್ರಕರ್ತೆ ರೋಹಿಣಿ ಸಿಂಗ್ ಎಂಬುವವರು ಶಾರುಖ್ ಅವರ ಅದೇ ಹೇಳಿಕೆಯನ್ನು ಉಲ್ಲೇಖಿಸಿ ಅಭಿಮಾನಿಗಳ ಸಂಭ್ರಮಾಚರಣೆಯ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.