Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೆಂಡಾಲ್ ಕಿತ್ತುಹಾಕಿದ ಪೋಲಿಸರೇ ಮತ್ತೆ ಪೆಂಡಾಲ್ ಹಾಕಿದರು

ಪೊಲೀಸ್ ಬಲ ಬಳಸಿ ರೈತ ಚಳವಳಿಯನ್ನು ಬಗ್ಗು ಬಡಿಯಬೇಕು ಅಂತ ನಿಮ್ಮ ತಲೇಲಿದ್ರೆ ಅದು, ನಿಮ್ಮ  ಮೂರ್ಖತನ. ರೈತ ಚಳವಳಿ ರಬ್ಬರ್ ಚೆಂಡಿದ್ದಂತೆ, ನೀವು ಎಷ್ಟು ಬಲವಾಗಿ ಹೊಡೆಯುತ್ತಿರೋ ಅಷ್ಟು ಮೇಲಕ್ಕೆ ಚಿಮ್ಮುತ್ತೆ, ಸರ್ಕಾರಕ್ಕೆ ತನ್ನ ತಪ್ಪುನ್ನು ಅರ್ಥ ಮಾಡಿಸುತ್ತೇವೆ ರೈತ ನಾಯಕ ಚಾಮರಸ ಮಾಲಿ ಪಾಟೀಲ್ ಹೇಳಿದ್ದರು.

ಪೊಲೀಸ್ ಬಲ ಬಳಸಿ, ಮಂಡ್ಯದಲ್ಲಿ ಚಳುವಳಿ ನಿರತ ರೈತ ಸಂಘದ ಕಾರ್ಯಕರ್ತರನ್ನು ಏಕಾಏಕಿ ಬಂಧಿಸಿ, ಅವರಿದ್ದ ಪೆಂಡಾಲ್ ನ್ನು ಕಿತ್ತು ಹಾಕ್ಕಿದ್ದರು. ಆದರೆ ರೈತ ಸಂಘವು, ಇಂದು ಪ್ರತಿಭಟನೆಯನ್ನು ಮುಂದುವರೆಸುವ ನಿರ್ಧಾರ ತೆಗೆದುಕೊಂಡ್ಡದ್ದರಿಂದ, ಪೆಂಡಾಲ್ ಕಿತ್ತುಹಾಕಿದ ಪೋಲಿಸರೇ ಮತ್ತೆ ಪೆಂಡಾಲ್ ಹಾಕಿದರು. ಪೋಲಿಸರೇ ಪೆಂಡಾಲ್ ಹಾಕಿದ್ದು ಮುಖಭಂಗವಾಗಿದೆ.

ರೈತರ ಅಹೋರಾತ್ರಿ ಧರಣಿಯು ಮುಂದುವರೆದಿದೆ.  ಪ್ರತಿಭಟನೆಯಲ್ಲಿ, ಕೆಂಪೂಗೌಡ, ಸುನೀತಾ ಪುಟ್ಟಣ್ಣಯ್ಯ,  ಸ್ಮಿತಾ ಪುಟ್ಟಣ್ಣಯ್ಯ  ಮಧುಚಂದನ್, ಹರೀಶ್, ಪಿ.ಡಿ.ರಮೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!