ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸರ್ಕಾರವು ರಾಜ್ಯಾದ್ಯಂತ ಜೂನ್ 27 ರಂದು ಆಚರಿಸುತ್ತಿದ್ದು ಮದ್ದೂರಿನಲ್ಲಿ ತಾಲ್ಲೂಕು ಆಡಳಿತವು ಹಮ್ಮಿಕ್ಕೊಂಡಿರುವ ಜಯಂತಿ ಕಾರ್ಯಕ್ರಮದ ಯಶಸ್ವಿ ಆಚರಣೆಗೆ ಸಿದ್ದತೆ ನಡೆಸಲು ಮದ್ದೂರಿನ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಸಭೆಯನ್ನು ಜೂ18ರಂದು ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 3 ಘಂಟೆಗೆ ಸಭೆ ಕರೆಯಲಾಗಿದೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಯುವ ಘಟಕದ ತಾಲ್ಲೂಕು ಆಧ್ಯಕ್ಷ ಮನು ತಿಪ್ಪೂರು ತಿಳಿಸಿದ್ದಾರೆ.
ಪೂರ್ವ ಸಿದ್ದತೆ ಸಭೆಯಲ್ಲಿ ಕೆಂಪೇಗೌಡ ಜಯಂತಿ ಆಚರಣೆಯ ಯಶಸ್ವಿಗಾಗಿ ಚರ್ಚಿಸಿ, ಜವಾಬ್ದಾರಿ ಹಂಚಿಕೆ ಮಾಡಲಾಗುವುದು, ಅಲ್ಲದೇ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಪುನರ್ ರಚನೆ ಯ ಮೂಲಕ ಜನಾಂಗದ ಸರ್ವಾಂಗೀಣಾ ಅಭಿವೃದ್ಧಿ ಗೆ ನಿರಂತರ ಶ್ರಮಿಸುವುದು ಸಂಘದ ಆಶಯವಾಗಿದೆ, ಆದ್ದರಿಂದ ಸಭೆಗೆ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.